ಮಂಗಳೂರಿನ ಉಳ್ಳಾಲದಲ್ಲಿ ಶೂಟೌಟ್ಕು; ಖ್ಯಾತ ಕ್ರಿಮಿನಲ್ ಕಾಲಿಯಾ ರಫೀಕ್ ಕಗ್ಗೊಲೆ..

Source: S O News Service | By I.G. Bhatkali | Published on 15th February 2017, 12:35 PM | Coastal News |

ಮಂಗಳೂರು: ಹಲವಾರು ಕೊಲೆ ಪ್ರಕರಣದ ಆರೋಪಿ, ಕುಖ್ಯಾತ ಕ್ರಿಮಿನಲ್ ಉಪ್ಪಳದ ಕಾಲಿಯಾ ರಫೀಕ್ ನನ್ನು ತಂಡವೊಂದು ಬರ್ಬರವಾಗಿ ಇರಿದು ಕೊಲೆಗೈದಿದೆ.ಮಂಗಳವಾರ ತಡರಾತ್ರಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಬಳಿ ಈತ ಸಂಚರಿಸುತ್ತಿದ್ದ ರಿಟ್ಜ್ ಕಾರಿಗೆ ಮುಂಭಾಗದಿಂದ ಮಿನಿ ಲಾರಿಯನ್ನು ಢಿಕ್ಕಿ ಹೊಡೆಸಿ, ಗುಂಡುತೂರಾಟ ನಡೆಸಿದ್ದು ಬಳಿಕ  ಈತನನ್ನು ತಲವಾರಿನಿಂದ ಕಡಿದು ಕೊಲೆಗೈಯ್ಯಲಾಯಿತು.ಕಾರಿನಲ್ಲಿ ಜೊತೆಗಿದ್ದವನಿಗೆ  ಗಂಭೀರ ಗಾಯವುಂಟಾಗಿದೆ.

ಉಳ್ಳಾಲ ಇನ್ಸ್ ಪೆಕ್ಟರ್ ಗೋಪಿಕೃಷ್ಣ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.ಮೃತದೇಹವನ್ನು  ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ದರೋಡೆ,ಕೊಲೆ,ಹಲ್ಲೆಯನ್ನೇ ಕಸುಬನ್ನಾಗಿಸಿದ್ದ ಕಾಲಿಯಾ ರಫೀಕ್ ಅಂತಾರಾಜ್ಯ ಮಟ್ಟದ ಕ್ರಿಮಿನಲ್ ಆಗಿದ್ದು,ಉಪ್ಪಳವನ್ನೇ ತನ್ನ ಅಡ್ಡೆಯನ್ನಾಗಿಸಿದ್ದ. ಕೇರಳ ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಮೊಕದ್ದಮೆಗಳಿವೆ.ಹಲವಾರು ವರ್ಷಗಳಿಂದ ಈತ ಜೈಲಿನಲ್ಲಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಈತ ಜೈಲಿನಿಂದ ಬಿಡುಗಡೆಗೊಂಡಿದ್ದ.ಮೂರು ದಿನಗಳ ಹಿಂದೆಯಷ್ಟೇ ಉಪ್ಪಳದ ವೈದ್ಯರೋರ್ವರಿಗೆ ಹಫ್ತಾಕ್ಕಾಗಿ ಬೇಡಿಕೆಯನ್ನಿಟ್ಟಿದ್ಧ. ಈತನ ವಿರೋಧಿ ಪಾಳಯವಾದ ಉಪ್ಪಳದ ತಟಡವೊಂದು ಈ ಕೊಲೆಕೃತ್ಯ ನಡೆಸಿರುವ ಬಗ್ಗೆ ಸಂಶಯವಿದೆ.

Read These Next