ರಾಯಲ್ಪಾಡು : ಗ್ರಾಮದ ಶ್ರೀಕಾಶಿವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತವಾಗಿ ಸ್ವಾಮಿಗೆ ಮಹನ್ಯಾಸಪೂರ್ವಕ ರುದ್ರಾಭಿಷೇಕ ಪಂಚಸೂಕ್ತಗಳೊಂದಿಗೆ ಪಂಚಾಮೃತ ಅಭಿಷೇಕ ವಿಶೇಷಅಲಂಕಾರದೊಂದಿಗೆ ಮಹಾಮಂಗಳಾರತಿ ತೀರ್ಥಪ್ರಸಾದವು ನಡೆಯಿತು.ರಾತ್ರಿ ನಾಲ್ಕು ಯಾಮಗಳ ರುದ್ರಾಭಿಷೇಕದೊಂದಿಗೆ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.
ಪೂಜಾಕಾರ್ಯಕ್ರಮಗಳನ್ನು ವೆಲ್ಲಾಲ ಸತ್ಯನಾರಾಯಣಶಾಸ್ತ್ರೀ , ಸುಬ್ಬಕೃಷ್ಣಶರ್ಮ , ನಂಗಲಿಅರಣ್ಕುಮಾರ್ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಸಾರಥಿ , ಮೋಹನಯ್ಯಶೆಟ್ಟಿ , ಅಪ್ಪೋರೊಳ್ಳರಾಜಣ್ಣ , ಕೋಲಾರದ ಶಿವಣ್ಣ , ಮಹೇಶ್ , ವೇಮನ್ನ , ರಾಮಿರೆಡ್ಡಿ , ತುಮ್ಮಲಪಲ್ಲಿ ಗೋಪಾಲರೆಡ್ಡಿ , ರಮಣಾರೆಡ್ಡಿ , ರಾಯಲ್ಪಾಡು ಗ್ರಾಮಸ್ಥರು ಹಾಗು ರಾಜ್ಯ ಹಾಗು ನೆರೆಯ ರಾಜ್ಯಗಳಿಂದಲೂ ಭಕ್ತರು ಬಂದು ಸ್ವಾಮಿಯ ದರ್ಶನ ಪಡೆದರು.
ಇದೇ ರೀತಿಯಾಗಿ ರಾಯಲ್ಪಾಡು ಹೋಬಳಿಗೆ ಸಂಬಂದಿಸಿದ ಈಶ್ವರ ದೇವಾಲಯಗಳಾದ ಗೌನಿಪಲ್ಲಿ ಕಾಶಿವಿಶ್ವೇಶ್ವರ ದೇವಾಲಯ , ಮಲ್ಲಿರೆಡ್ಡಿಕೊಮ್ಮಲು ಬೀಮಲಿಂಗೇಶ್ವರ ದೇವಾಲಯಗಳಲ್ಲಿ ಪಂಚಾಮೃತಾಭಿಷೇಕ ಮಹಾಗಣಪತಿ , ನವಗ್ರಹ , ರುದ್ರಹೋಮ ಹಾಗು ಅಲಂಕಾರ ಮಹಾಪ್ರಸಾದಗಳ ಸೇವೆಗಳು ನಡೆಯಿತು.