ಕೋಲಾರ: ಜನ ಸಾಮಾನ್ಯರ ದಿನ ನಿತ್ಯದ ಅಗತ್ಯ ವಸ್ತುಗಳಾದ ಡೀಜಲ್, ಪೆಟ್ರೋಲ್, ಗ್ಯಾಸ್ನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕೆಂದು ಒತ್ತಯಿಸಿ ಅ.೪ ರ ಗುರುವಾರದಂದು ಕೋಲಾರದಲ್ಲಿ ರೈಲ್ವೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಇನ್ನು ರಾಜಕಾರಣಿಗಳಿಂದ ಜನ ಸಾಮಾನ್ಯರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ್ಲ. ಅಧಿಕಾರಕ್ಕೆ ಬಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹೆಸರು ಹೇಳಿಕೊಂಡು ರೈತರೇ ಈ ದೇಶದ ಬೆನ್ನೆಲಬು ಎಂದು ಅನ್ನದಾತನ ಬೆನ್ನನ್ನು ಗೊತ್ತಿಲ್ಲದ ಹಾಗೆ ಮುರಿಯುತ್ತಿದ್ದಾರೆ. ಒಂದು ಕಡೆ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾಗುತ್ತಿದ್ದರೆ, ಮತ್ತೊಂದು ಕಡೆ ಕಳಪೆ ಬಿತ್ತನೆ ಬೀಜ ಔಷಧಿಗಳಿಂದ ಬೆಳೆಗಳನ್ನು ನಾಶವಾಗುತ್ತಿದ್ದರೆ ಮತ್ತೊಂದು ಕಡೆ ಸಮೃದ್ದವಾದ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಆರ್ಭಟಕ್ಕೆ ಕಡಿವಾಣ ಇಲ್ಲದಾಗಿದೆ. ಮತ್ತೊಂದು ಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ಸಾಮಾನ್ಯರ ವಿರೋಧಿಯಿಂದ ದಿನೇ ದಿನೇ ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸಲ್, ಅಡಿಗೆ ಅನೀಲದ ಬೆಲೆ ಏರಿಕೆಗೆ ಕಡಿವಾಣ ಇಲ್ಲದಾಗಿದೆ. ಕೇಂದ್ರ ಸರ್ಕಾರ ನಾವು ಕಡಿಮೆ ಬೆಲೆಗೆ ರಾಜ್ಯಕ್ಕೆ ನೀಡುತ್ತಿದ್ದೇವೆ. ರಾಜ್ಯ ಸರ್ಕಾರ ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿದ್ದಾರೆಂದು ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸಿಕೊಂಡು ಜನ ಸಾಮಾನ್ಯರನ್ನು ಬೆತ್ತಲೆ ಮಾಡುತ್ತಿರುವರ ವಿರುದ್ಧ ಜನ ಸಾಮಾನ್ಯರು ಶಾಪಹಾಕುತ್ತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ರೈತನು ಬೆಳೆದ ಬೆಳೆಗೆ ಬೆಲೆ ನಿಗಧಿ ಮಾಡಲು ಆರ್ಥಿಕ ತಜ್ಞರ ಸಲಹೆ ಬೇಕು ಆದರೆ ಕೋಟಿ, ಕೋಟಿ ನುಂಗಿ ನೀರು ಕುಡಿಯುವ ಕಂಪನಿಗಳ ತಯಾರಿಸುವ ವಸ್ತುಗಳ ಮೇಲೆ ಬೆಲೆ ನಿಗಧಿ ಮಾಡುವ ಅಧಿಕಾರ ಮಾತ್ರ ಅವರಿಗಿದೆ. ಆದರೆ ರೈತನು ಬೆಳೆದ ಬೆಳೆಗೆ ಬೆಲೆ ನಿಗಧಿ ಮಾಡಲು ಯಾಕೆ ಅವಕಾಶವಿಲ್ಲ? ಅದರ ಜೊತೆಗೆ ಇಂದು ಪೆಟ್ರೋಲ್ , ಡೀಸಲ್ ಬೆಲೆ, ಅಡಿಗೆ ಅನೀಲದ ಬೆಲೆ ದಿನೇ ದಿನೇ ಏರಿಕೆಯಿಂದ ಜನ ಸಾಮಾನ್ಯರನ್ನು ರಕ್ಷಿಸಲು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕೆಂದು ಒತ್ತಾಯಿಸಿ ದಿನಾಂಕ:04-10-2018 ರ ಗುರುವಾರ ಬೆಳಿಗ್ಗೆ 9-00 ಗಂಟೆಗೆ ರೈಲ್ವೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಕೇಂದ್ರ ಸರ್ಕಾರದ ಜನ ಸಾಮಾನ್ಯರ ಕಷ್ಟಗಳನ್ನು ಮನವರಿಕೆ ಮಾಡಲು ಈ ಹೋರಾಟ ಹಮ್ಮಿಕೊಂಡು ಎಚ್ಚರಿಕೆ ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮುಳಬಾಗಿಲು ತಾ.ಅಧ್ಯಕ್ಷ ಫಾರುಕ್ಪಾಷ, ರಂಜಿತ್ಕುಮಾರ್, ಸಾಗರ್, ಯಲುವಳ್ಳಿ ಪ್ರಭಾಕರ್ ಶಿವ, ಸುಪ್ರಿಂಚಲ, ಐತಾಂಡಹಳ್ಳಿ ಅಮರೀಶ್, ವಡ್ಡಹಳ್ಳಿ ಮಂಜುನಾಥ, ಕ್ಯಾಸಂಬಳ್ಳಿ ಪ್ರತಾಪ್, ವೇಮಗಲ್ ಅಮರನಾರಾಯಣಸ್ವಾಮಿ, ಚಂದ್ರಪ್ಪ, ಕೇಶವ, ಕೊಮ್ಮನಹಳ್ಳಿ ನವೀನ್, ಹೆಬ್ಬಣಿ ಆನಂದ್ರೆಡ್ಡಿ, ಎಂ ಹೊಸಹಳ್ಳಿ ವೆಂಕಟೇಶ್ ಮುಂತಾದವರಿದ್ದರು.