ಮುಂಡಗೋಡ : . ಅಗಸ್ಟ್ 1 ರಿಂದಲೇ ಈ ಪ್ಲಾಸ್ಟಿಕ್ ನಿಷೇದ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಪರಿಸರ ರಕ್ಷಣೆ ಮಾಡುವುದನ್ನು ನಮ್ಮ ಮನೆಯಿಂದಲೇ ಪ್ರಾರಂಭೀಸಬೇಕು ಎಂದು ಜೆಎಮ್ಎಫ್ಸಿ ನ್ಯಾಯಾಧೀಶ ಈರನಗೌಡ ಕಬ್ಬೂರ ಹೇಳಿದರು.
ಅವರು ಜೆಎಮ್ಎಫ್ಸಿ ನ್ಯಾಯಾಲಯದ ಸಭಾಂಗಣದಲ್ಲಿ ಪರಿಸರದಲ್ಲಿ ಪ್ಲಾಸ್ಟಿಕ್ ಮುಕ್ತಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಜಿಸಲಾಗಿದ್ದ ಹೋಟೆಲ್, ಬೇಕರಿ, ಕಿರಾಣಿ ವರ್ತಕರ ಸಭೆಯನ್ನುದ್ದೇಶಿಮಾತನಾಡಿದರು.
ಪ್ಲಾಸ್ಟೀಕ್ ದಿಂದ ಪರಿಸರದ ಮೇಲೆ ಕೆಟ್ಟಪರಿಣಾಮ ಬೀಳುವುತ್ತಿರುವದರಿಂದ ಲಾಭ ನಷ್ಟವನ್ನು ಮಾತ್ರ ಪರಿಗಣಿಸದೇ ಪರಿಸರ ಹಾಗೂ ಜನರ ಆರೋಗ್ಯ ಹಿತ ದೃಷ್ಟಿಯಿಂದ ಪ್ರತಿಯೊಬ್ಬರು ಅವಶ್ಯವಾಗಿ ಚಿಂತಿಸಬೇಕಿದ್ದು, ಕಿರಾಣಿ ಅಂಗಡಿ, ಹೋಟೆಲ್, ಬೇಕರಿ ಸೇರಿದಂತೆ ಯಾವುದೇ ವ್ಯಾಪಾರಸ್ಥರಿರಲಿ ಪ್ರತಿಯೊಬ್ಬರು ಕೂಡ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿ ವ್ಯವಹರಿಸುವಂತೆ ಹೇಳಿದರು
ಪ್ಲಾಸ್ಟೀಕ್ಗೆ ಮುಕ್ತಿ ಹಾಡಲು ಪ್ರತಿಯೊಬ್ಬರು ಕೈಜೋಡಿಸಿದರೆ ಇದು ಯಶಸ್ವಿಯಾಗುತ್ತದೆ. ನಮ್ಮ ಲಾಭದ ದೃಷ್ಟಿಯಿಂದ ತಾತ್ಕಾಲಕ್ಕೆ ಪ್ಲಾಸ್ಟಿಕ್ ಬಳಸುವುದರಿಂದ ಪರಿಸರ ಹಾಗೂ ಸಾರ್ವಜನಿಕರ ಮೇಲೆ ಆಗುವ ದುಷ್ಪರಿಣಾಮಕ್ಕೆ ಯಾರು ಹೊಣೆಯಾಗುತ್ತಾರೆ ಎಂದು ಪ್ರಶ್ನಿಸಿದ ಅವರು, ಸಾಮಾಜಿಕ ಕಳಕಳಿಯಿಂದ ನಡೆದುಕೊಳ್ಳುವ ಜವಾಬ್ದಾರಿ ನಮ್ಮೆಲರ ಮೇಲಿದೆ. ಶಾಲಾ ಕಾಲೇಜುಗಳ ಮಕ್ಕಳಿಗೆ ಪ್ಲಾಸ್ಟಿಕ್ ನಿಂದ ಆಗುವ ಹಾನಿ ಹಾಗೂ ಪರಿಸರದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತೆ ಪ್ರತಿಯೊಂದು ಶಾಲಾ ಕಾಲೇಜುಗಳ ಮುಖ್ಯಾಧ್ಯಾಪಕರಿಗೆ ಆದೇಶಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಅವರಿಗೆ ಸೂಚಿಸಿದರು
ತಹಸೀಲ್ದಾರ ಅಶೋಕ ಗುರಾಣಿ, ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಬೈಲಪತ್ತಾರ, ಸಮಾಜ ಕಲ್ಯಾಣಾಧಿಕಾರಿ ಅಶೊಕ ಪವಾರ, ಪ.ಪಂ ಇಂಜಿನಿಯರ್ ಶಂಕರ ದಂಡಿನ್, ನ್ಯಾಯವಾದಿ ಸುಜೀತ ಸದಾನಂದ, ಸಲೀಂ ನಂದಿಕಟ್ಟಿ, ಹೊಟೆಲ್ ವ್ಯಾಪರಸ್ಥ ನಾರಾಯಣ ಉಪ್ಪುಂದ, ಉಮೇಶ ರಾಯ್ಕರ, ಸುನೀಲ ಬೈಲೂರ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಹುದ್ಮನಿ, ಕಾರ್ಯದರ್ಶಿ ಎಸ್.ಡಿ.ಮುಡೆಣ್ಣವರ ಮುಂತಾದವರು ಉಪಸ್ಥಿತರಿದ್ದರು.