ಭಟ್ಕಳ: ನಾಯಿ ಅಡ್ಡಬಂದು ಬೈಕ್ ಹಿಂಬದಿ ಸವಾರ ಸಾವು
ಭಟ್ಕಳ: ಬೈಕ್ ಚಲಿಸುತ್ತಿದ್ದ ವೇಳೆ ರಸ್ತೆಯಲ್ಲಿ ನಾಯಿ ಅಡ್ಡಬಂದ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ಹಿಂಬಂದಿ ಸವಾರ ಕೆಳಗಡೆ ಬಿದ್ದು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ರಾ.ಹೆ.೬೬ ಜರಗಿದೆ.
ಮೃತ ಬೈಕ್ ಹಿಂಬದಿ ಸವಾರನನ್ನು ಮೂಸಾ ನಗರದ ಬದ್ರಿಯಾ ಕಾಲೋನಿ ನಿವಾಸಿ ಶಾಹಬುದ್ದೀನ್ ಬಷೀರ್ ಮುಲ್ಲಾ(೧೮) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಯಂತೆ ಬೈಕ್ ಸವಾರ ಸೈಯ್ಯದ್ ಮುಬಾರಕ್ ಹಾಗೂ ಶಾಹಬುದ್ದಿನ್ ಕೂಲಿ ಕಾರ್ಮಿಕರಾಗಿದ್ದು ಕೆಲಸವನ್ನು ಮುಗಿಸಿ ಸಂಜೆ ಶಿರಾಲಿ ವೆಂಕಟಾಪುರದಿಂದ ಭಟ್ಕಳಕ್ಕೆ ಬರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬಂದ ನಾಯಿಯನ್ನು ಉಳಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿದ್ದರಿಂದ ಹಿಂಬದಿ ಸವಾರ ಶಾಹಬುದ್ದಿನ್ ಕೆಳಗಡೆ ಬಿದ್ದಿದ್ದಾನೆ. ಅದೇ ವೇಳೆ ಹೆದ್ದಾರಿಯಲ್ಲಿ ವೇಗದಿಂದ ಬರುತ್ತಿದ್ದ ಲಾರಿಯೊಂದು ಶಾಹಬುದ್ದಿನ್ ಗೆ ಬಡಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನರು ಸ್ಥಳದಲ್ಲಿ ಸೇರಿದ್ದು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಿಪಿಐ ಸುರೇಶ್ ನಾಯಕ ಹಾಗೂ ಪೊಲೀಸ್ ಸಿಬಂಧಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.