ಭಟ್ಕಳ: ಇಲ್ಲಿನ ಮಾವಳ್ಳಿ-2 ಗ್ರಾ.ಪಂ. ಕಟ್ಟಡವನ್ನು ಮಾವಳ್ಳಿ-1ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳು ಜುಲೈ 31 ರಂದು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾವಳ್ಳಿ-1 ಗ್ರಾಮ ಪಂಚಾಯತದ ಅಧ್ಯಕ್ಷರು, ಸರ್ವ ಸದಸ್ಯರ ಗಮನಕ್ಕೆ ತರದೇ ಸರ್ವಾಧಿಕಾರಿ ಧೋರಣೆ ಮಾಡಿರುವುದು ಖಂಡನೀಂಯವಾದುದು ಎಂದು ಮಾವಳ್ಳಿ-1 ಗ್ರಾ.ಪಂ. ಸದಸ್ಯ ಕುಮಾರ ನಾಯ್ಕ ಆಗ್ರಹಿಸಿದರು.
ಅವರು ಇಲ್ಲಿನ ಮುರ್ಡೇಶ್ವರದ ಮಾವಳ್ಳಿ-1 ಗ್ರಾಮ ಪಂಚಾಯತ್ ಸಭಾಗೃಹದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.
‘ಮಾವಳ್ಳಿ-1 ವ್ಯಾಪ್ತಿಯ ಸರ್ವೇ ನಂ 650/ಅ1ಬ ರಲ್ಲಿನ 2 ಎಕರೆ ಜಾಗವನ್ನು ಮಾವಳ್ಳಿ-1 ಕ್ಕೆ (ಆಟದ ಮೈದಾನಕ್ಕಾಗಿ) ನವಗ್ರಾಮಕ್ಕಾಗಿ ಖಾಯ್ದಿರಿಸಿ ಜಾಗವಾಗಿದ್ದು, ಆ ಜಾಗದಲ್ಲಿ ಹಿಂದಿನ ಜಿಲ್ಲಾ ಪಂಚಾಯತ ಅನುದಾನದಲ್ಲಿ ಕಟ್ಟಡ ನಿರ್ಮಿಸಿ ಸದ್ಯ ಗ್ರಂಥಾಲಯ ಹಾಗೂ ಉಚಿತ ಕಾನೂನು ಸಲಹಾ ಕೇಂದ್ರ ನಡೆಯುತ್ತಿದ್ದು, ಈ ವೇಳೆಯಲ್ಲಿ ಜಿಲ್ಲಾಧಿಕಾರಿಗಳು ಜುಲೈ 31ರಂದು ಮಾವಳ್ಳಿ-2 ಪಂಚಾಯತ ಕಛೇರಿಗೆ ಸ್ವಂತ ಕಟ್ಟಡ ಇಲ್ಲದ ಹಿನ್ನೆಲೆ ಮಾವಳ್ಳಿ-1 ಪಂಚಾಯತ ಕಟ್ಟಡ ಉಪಯೋಗಕ್ಕೆ ಅನುಮತಿ ನೀಡಿ ಎಂಬುದಾಗಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಈ ಬಗ್ಗೆ ಮಾವಳ್ಳಿ-1 ಪಂಚಾಯತ ಅಧ್ಯಕ್ಷರು, ಸದಸ್ಯರ ಹಾಗೂ ಗ್ರಾಮಸ್ಥರ ಗಮನಕ್ಕೆ ತಾರದೇ ಸರ್ವಾಧಿಕಾರ ನಿರ್ಣಯ ಕೈಗೊಂಡಿದ್ದಾರೆ. ಈ ನಿರ್ಣಯವನ್ನು ಮಾವಳ್ಳಿ-1 ಪಂಚಾಯತ ಅಧ್ಯಕ್ಷರು ಸರ್ವ ಸದಸ್ಯರ ತೀವ್ರ ವಿರೋಧಿಸುತ್ತೇವೆ ಎಂದು ಆಗ್ರಹಿಸಿದರು.
ಮಾವಳ್ಳಿ-1 ಇನ್ನೋರ್ವ ಪಂ.ಸದಸ್ಯ ಕೃಷ್ಣ ನಾಯ್ಕ ಜಮೀನ್ದಾರ ಮಾತನಾಡಿ ‘ಮಾವಳ್ಳಿ-1 & ಮಾವಳ್ಳಿ-2 ಪಂಚಾಯತ ಕಾರ್ಯಲಯವನ್ನು ಒಂದೇ ವ್ಯಾಪ್ತಿಯಲ್ಲಿ ತರುವುದು ಸೂಕ್ತವಲ್ಲ. ಮುರ್ಡೇಶ್ವರವು ವಿಶ್ವ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವುದರಿಂದ ಈ ಹಿಂದೆಯೇ ರಾಜ್ಯ ಪಂಚಾಯತ ವಿಭಾಗದ ಸಮಿತಿಗೆ ಪಟ್ಟಣ ಪಂಚಾಯತ ಮಾಡಲು ಪಂಚಾಯತ ಸದಸ್ಯರ ಅಭಿಪ್ರಾಯವನ್ನು ಸರ್ವಾನುಮತದಿಂದ ಸಭೆಗೆ ಸೂಚಿಸಿರುತ್ತೇವೆ. ಆದರೆ ಯಾರದ್ದೋ ಒತ್ತಾಸೆಗಾಗಿ ಮಾವಳ್ಳಿ ಗ್ರಾಮ ಪಂಚಾಯತನ್ನು ಇಬ್ಭಾಗ ಮಾಡಿ ನಾಗರಿಕರಿಗೆ ಹಿಂಸೆಯಾಗುವಂತೆ ಮಾಡಿದ್ದಾರೆ. ಇದರ ಬದಲು ಜಿಲ್ಲಾಢಳಿತ ಎರಡು ಗ್ರಾ.ಪಂ.ನ್ನು ಪಟ್ಟಣ ಪಂಚಾಯತ ಆಗಿ ಮೇಲ್ದರ್ಜೇಗೆರಿಸಿ. ಹಾಗೂ ಈ ವಿಷಯದಲ್ಲಿ ಜಿಲ್ಲಾಢಳಿತ ಕ್ರಮ ಕೈಗೊಳ್ಳದಿದ್ದಲ್ಲಿ ಸರ್ವ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿ ಗ್ರಾಮಸ್ಥರ ಜೊತೆ ಸೇರಿ ಉಗ್ರ ಪ್ರತಿಭಟನೆ ಮಾಡಬೇಕೆಂಬ ಎಚ್ಚರಿಕೆಯನ್ನು ನೀಡಿದರು.
ಪಂಚಾಯತ ಸಲ್ಲಿಸಿದ ಠರಾವಿಗೆ ಜಿಲ್ಲಾಢಳಿತದಲ್ಲಿ ಬೆಲೆಯಿಲ್ಲ: ಈ ಹಿಂದೆಇಲ್ಲಿನ ಮಾವಳ್ಳಿ-1 ಸಾಮಾನ್ಯ ಸಭೆಯಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಘನತ್ಯಾಜ್ಯಘಟಕ ನಿರ್ಮಾಣಕ್ಕೆ ಜಿಲ್ಲಾಢಳಿತಕ್ಕೆ ಸಭೆಯಲ್ಲಿ ಸದಸ್ಯರು ಒಮ್ಮತ್ತದಿಂದ ಠರಾವು ಮಾಡಿದ್ದರು. ಆದರೆ ಈ ಬಗ್ಗೆ ಜಿಲ್ಲಾಢಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವಾಗಿದೆ. ಹಾಗಿದ್ದರೆ ಸ್ಥಳಿಯ ಪಂಚಾಯತ ಠರಾವಿಗೆ ಬೆಲೆಯಿಲ್ಲವೇ ಎಂದು ಪಂಚಾಯತ ಸದಸ್ಯರ ಒಕ್ಕೊರಲ ಆಗ್ರಹವಾಗಿದೆ. ಶೀಘ್ರದಲ್ಲಿ ಪಟ್ಟಣ ಪಂಚಾಯತ ಮಾಡಿದ್ದಲ್ಲಿ ಸರಕಾರದಿಂದ ಬರದುವ ಅನುದಾನದಿಂದ ವಿಶ್ವ ಪ್ರಸಿದ್ಧ ಮುರ್ಡೇಶ್ವರದ ಬೆಳವಣಿಗೆಗೆ ಪಂಚಾಯತ ಸದಸ್ಯರು ಶ್ರಮಿಸಲಿದ್ದೇವೆ ಎಂಬ ಆಗ್ರಹ ಮಾವಳ್ಳಿ-1 ಪಂಚಾಯತ ಸದಸ್ಯರದ್ದಾಗಿದೆ.
ಈ ಸಂಧರ್ಭದಲ್ಲಿ ಮಾವಳ್ಳಿ-1 ಪಂಚಾಯತ ಸದಸ್ಯರಾದ ಜಟ್ಟಪ್ಪ ನಾಯ್ಕ, ಜಯಂತ ನಾಯ್ಕ, ರಶಿಯಾ ಶೇಖ್, ಸಬಿಯಾ ಕಾತೂನ್, ಜಾನಕೀ ಹರಿಕಾಂತ, ಮಂಜುಳ ನಾಯ್ಕ, ಪಾರ್ವತಿ ಹರಿಕಾಂತ, ಈಶ್ವರ ನಾಯ್ಕ ಉಳಿದ 10 ಸದಸ್ಯರು ಉಪಸ್ಥಿತರಿದ್ದರು.
Read These Next
ಕಾರವಾರ ಲೋಕಸಭಾ ಚುನಾವಣೆ: ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು
ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬAಧಿಸಿದAತೆ , ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಯಾವುದೇ ಅಭ್ಯರ್ಥಿಗಳು ತಮ್ಮ ...
ಭಟ್ಕಳ: ಅರಬ್ಬಿ ಸಮುದ್ರದಲ್ಲಿ ಮುಳುಗಿ ಬಾಲಕ ಮೃತ್ಯು; ಯುವಕ ನಾಪತ್ತೆ
ಅರಬ್ಬಿ ಸಮುದ್ರದಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟಿದ್ದು, ಮತ್ತೋರ್ವ ಯುವಕ ನಾಪತ್ತೆಯಾದ ಘಟನೆ ಸೋಡಿಗದ್ದೆ ಬಳಿಯ ಹಡಿನ ಮುಲ್ಲಿ ...
ದಾಂಡೇಲಿ ನದಿಯಲ್ಲಿ ಮುಳುಗಿ ಆರು ಪ್ರವಾಸಿಗರ ದುರ್ಮರಣ
ದಾಂಡೇಲಿ : ತಾಲೂಕಿನ ಅಕೋಡಾ ಗ್ರಾಮದ ಬಿರಿಯಂಪಲ್ಲಿ ಕಾಳಿ ನದಿಯಲ್ಲಿ ಮುಳುಗಿ ಆರು ಪ್ರವಾಸಿಗರು ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.
ಭಟ್ಕಳ ಸಮೀಪದ ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ
ಭಟ್ಕಳ : ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮುಳುಗಿದ ಘಟನೆ ಶನಿವಾರ ಭಟ್ಕಳ ಸಮೀಪ ನಡೆದಿದೆ. ...
ಕಾರವಾರ: ಮತದಾನ ಜಾಗೃತಿ ಜಾಥಾ
ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...
ಕಾರವಾರ: ಚುನಾವಣಾ ಕಂಟ್ರೋಲ್ ರೂಂ ಗೆ ವೆಚ್ಚ ವೀಕ್ಷಕರ ಭೇಟಿ
ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬAಧಿಸಿದAತೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರದಿರುವ 24*7 ಕಾರ್ಯನಿರ್ವಹಿಸುವ ಕಂಟ್ರೋಲ್ ...
ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಸಿ ಸುಳ್ಳು : ಸಿ lಎಂ ಸಿದ್ದರಾಮಯ್ಯ ಆರೋಪ
ಬೆಂಗಳೂರು : ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ...
ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ
ಬೀದರ್ : ಅಧಿಕಾರ, ಅವಕಾಶ, ಸಂಪತ್ತು ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...
ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು
ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...
ಬಳ್ಳಾರಿ ಲೋಕಸಭಾ ಚುನಾವಣೆ: ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು.
ಬಳ್ಳಾರಿ : 09-ಬಳ್ಳಾರಿ (ಪ.ಪಂ) ಲೋಕಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂಪಡೆಯುವ ದಿನವಾದ ಸೋಮವಾರದಂದು, ಓರ್ವ ...
ಪಟ್ಟಣ ಗ್ರಾಮದಲ್ಲಿ ಎತ್ತಿನ ಬಂಡಿಗಳ ಮೂಲಕ ಮತದಾನದ ಜಾಗೃತಿ
ಕಲಬುರಗಿ : ಕಲಬುರಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ...
ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು
ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...