ಭಟ್ಕಳ: ಇಲ್ಲಿನ ಮಾವಳ್ಳಿ-2 ಗ್ರಾ.ಪಂ. ಕಟ್ಟಡವನ್ನು ಮಾವಳ್ಳಿ-1ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳು ಜುಲೈ 31 ರಂದು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾವಳ್ಳಿ-1 ಗ್ರಾಮ ಪಂಚಾಯತದ ಅಧ್ಯಕ್ಷರು, ಸರ್ವ ಸದಸ್ಯರ ಗಮನಕ್ಕೆ ತರದೇ ಸರ್ವಾಧಿಕಾರಿ ಧೋರಣೆ ಮಾಡಿರುವುದು ಖಂಡನೀಂಯವಾದುದು ಎಂದು ಮಾವಳ್ಳಿ-1 ಗ್ರಾ.ಪಂ. ಸದಸ್ಯ ಕುಮಾರ ನಾಯ್ಕ ಆಗ್ರಹಿಸಿದರು.
ಅವರು ಇಲ್ಲಿನ ಮುರ್ಡೇಶ್ವರದ ಮಾವಳ್ಳಿ-1 ಗ್ರಾಮ ಪಂಚಾಯತ್ ಸಭಾಗೃಹದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.
‘ಮಾವಳ್ಳಿ-1 ವ್ಯಾಪ್ತಿಯ ಸರ್ವೇ ನಂ 650/ಅ1ಬ ರಲ್ಲಿನ 2 ಎಕರೆ ಜಾಗವನ್ನು ಮಾವಳ್ಳಿ-1 ಕ್ಕೆ (ಆಟದ ಮೈದಾನಕ್ಕಾಗಿ) ನವಗ್ರಾಮಕ್ಕಾಗಿ ಖಾಯ್ದಿರಿಸಿ ಜಾಗವಾಗಿದ್ದು, ಆ ಜಾಗದಲ್ಲಿ ಹಿಂದಿನ ಜಿಲ್ಲಾ ಪಂಚಾಯತ ಅನುದಾನದಲ್ಲಿ ಕಟ್ಟಡ ನಿರ್ಮಿಸಿ ಸದ್ಯ ಗ್ರಂಥಾಲಯ ಹಾಗೂ ಉಚಿತ ಕಾನೂನು ಸಲಹಾ ಕೇಂದ್ರ ನಡೆಯುತ್ತಿದ್ದು, ಈ ವೇಳೆಯಲ್ಲಿ ಜಿಲ್ಲಾಧಿಕಾರಿಗಳು ಜುಲೈ 31ರಂದು ಮಾವಳ್ಳಿ-2 ಪಂಚಾಯತ ಕಛೇರಿಗೆ ಸ್ವಂತ ಕಟ್ಟಡ ಇಲ್ಲದ ಹಿನ್ನೆಲೆ ಮಾವಳ್ಳಿ-1 ಪಂಚಾಯತ ಕಟ್ಟಡ ಉಪಯೋಗಕ್ಕೆ ಅನುಮತಿ ನೀಡಿ ಎಂಬುದಾಗಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಈ ಬಗ್ಗೆ ಮಾವಳ್ಳಿ-1 ಪಂಚಾಯತ ಅಧ್ಯಕ್ಷರು, ಸದಸ್ಯರ ಹಾಗೂ ಗ್ರಾಮಸ್ಥರ ಗಮನಕ್ಕೆ ತಾರದೇ ಸರ್ವಾಧಿಕಾರ ನಿರ್ಣಯ ಕೈಗೊಂಡಿದ್ದಾರೆ. ಈ ನಿರ್ಣಯವನ್ನು ಮಾವಳ್ಳಿ-1 ಪಂಚಾಯತ ಅಧ್ಯಕ್ಷರು ಸರ್ವ ಸದಸ್ಯರ ತೀವ್ರ ವಿರೋಧಿಸುತ್ತೇವೆ ಎಂದು ಆಗ್ರಹಿಸಿದರು.
ಮಾವಳ್ಳಿ-1 ಇನ್ನೋರ್ವ ಪಂ.ಸದಸ್ಯ ಕೃಷ್ಣ ನಾಯ್ಕ ಜಮೀನ್ದಾರ ಮಾತನಾಡಿ ‘ಮಾವಳ್ಳಿ-1 & ಮಾವಳ್ಳಿ-2 ಪಂಚಾಯತ ಕಾರ್ಯಲಯವನ್ನು ಒಂದೇ ವ್ಯಾಪ್ತಿಯಲ್ಲಿ ತರುವುದು ಸೂಕ್ತವಲ್ಲ. ಮುರ್ಡೇಶ್ವರವು ವಿಶ್ವ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವುದರಿಂದ ಈ ಹಿಂದೆಯೇ ರಾಜ್ಯ ಪಂಚಾಯತ ವಿಭಾಗದ ಸಮಿತಿಗೆ ಪಟ್ಟಣ ಪಂಚಾಯತ ಮಾಡಲು ಪಂಚಾಯತ ಸದಸ್ಯರ ಅಭಿಪ್ರಾಯವನ್ನು ಸರ್ವಾನುಮತದಿಂದ ಸಭೆಗೆ ಸೂಚಿಸಿರುತ್ತೇವೆ. ಆದರೆ ಯಾರದ್ದೋ ಒತ್ತಾಸೆಗಾಗಿ ಮಾವಳ್ಳಿ ಗ್ರಾಮ ಪಂಚಾಯತನ್ನು ಇಬ್ಭಾಗ ಮಾಡಿ ನಾಗರಿಕರಿಗೆ ಹಿಂಸೆಯಾಗುವಂತೆ ಮಾಡಿದ್ದಾರೆ. ಇದರ ಬದಲು ಜಿಲ್ಲಾಢಳಿತ ಎರಡು ಗ್ರಾ.ಪಂ.ನ್ನು ಪಟ್ಟಣ ಪಂಚಾಯತ ಆಗಿ ಮೇಲ್ದರ್ಜೇಗೆರಿಸಿ. ಹಾಗೂ ಈ ವಿಷಯದಲ್ಲಿ ಜಿಲ್ಲಾಢಳಿತ ಕ್ರಮ ಕೈಗೊಳ್ಳದಿದ್ದಲ್ಲಿ ಸರ್ವ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿ ಗ್ರಾಮಸ್ಥರ ಜೊತೆ ಸೇರಿ ಉಗ್ರ ಪ್ರತಿಭಟನೆ ಮಾಡಬೇಕೆಂಬ ಎಚ್ಚರಿಕೆಯನ್ನು ನೀಡಿದರು.
ಪಂಚಾಯತ ಸಲ್ಲಿಸಿದ ಠರಾವಿಗೆ ಜಿಲ್ಲಾಢಳಿತದಲ್ಲಿ ಬೆಲೆಯಿಲ್ಲ: ಈ ಹಿಂದೆಇಲ್ಲಿನ ಮಾವಳ್ಳಿ-1 ಸಾಮಾನ್ಯ ಸಭೆಯಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಘನತ್ಯಾಜ್ಯಘಟಕ ನಿರ್ಮಾಣಕ್ಕೆ ಜಿಲ್ಲಾಢಳಿತಕ್ಕೆ ಸಭೆಯಲ್ಲಿ ಸದಸ್ಯರು ಒಮ್ಮತ್ತದಿಂದ ಠರಾವು ಮಾಡಿದ್ದರು. ಆದರೆ ಈ ಬಗ್ಗೆ ಜಿಲ್ಲಾಢಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವಾಗಿದೆ. ಹಾಗಿದ್ದರೆ ಸ್ಥಳಿಯ ಪಂಚಾಯತ ಠರಾವಿಗೆ ಬೆಲೆಯಿಲ್ಲವೇ ಎಂದು ಪಂಚಾಯತ ಸದಸ್ಯರ ಒಕ್ಕೊರಲ ಆಗ್ರಹವಾಗಿದೆ. ಶೀಘ್ರದಲ್ಲಿ ಪಟ್ಟಣ ಪಂಚಾಯತ ಮಾಡಿದ್ದಲ್ಲಿ ಸರಕಾರದಿಂದ ಬರದುವ ಅನುದಾನದಿಂದ ವಿಶ್ವ ಪ್ರಸಿದ್ಧ ಮುರ್ಡೇಶ್ವರದ ಬೆಳವಣಿಗೆಗೆ ಪಂಚಾಯತ ಸದಸ್ಯರು ಶ್ರಮಿಸಲಿದ್ದೇವೆ ಎಂಬ ಆಗ್ರಹ ಮಾವಳ್ಳಿ-1 ಪಂಚಾಯತ ಸದಸ್ಯರದ್ದಾಗಿದೆ.
ಈ ಸಂಧರ್ಭದಲ್ಲಿ ಮಾವಳ್ಳಿ-1 ಪಂಚಾಯತ ಸದಸ್ಯರಾದ ಜಟ್ಟಪ್ಪ ನಾಯ್ಕ, ಜಯಂತ ನಾಯ್ಕ, ರಶಿಯಾ ಶೇಖ್, ಸಬಿಯಾ ಕಾತೂನ್, ಜಾನಕೀ ಹರಿಕಾಂತ, ಮಂಜುಳ ನಾಯ್ಕ, ಪಾರ್ವತಿ ಹರಿಕಾಂತ, ಈಶ್ವರ ನಾಯ್ಕ ಉಳಿದ 10 ಸದಸ್ಯರು ಉಪಸ್ಥಿತರಿದ್ದರು.
Read These Next
ಪುಲ್ವಾಮದಲ್ಲಿ ನಡೆದ ಯೋಧರ ಹತ್ಯೆ ಮಾನವೀಯತೆಯ ಹತ್ಯೆಯಾಗಿದೆ-ರಾಬಿತಾ ಮಿಲ್ಲತ್
ಭಟ್ಕಳ: ಫೆ.೧೪ರಂದು ದೇಶದ ಕಣಿವೆ ರಾಜ್ಯ ಕಾಶ್ಮಿರದ ಪುಲ್ವಾಮ ದಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ನಾವು ತೀವ್ರವಾಗಿ ...
ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ
ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...
ಪುಲ್ವಾಮ ಆತ್ಮಾಹುತಿ ಉಗ್ರದಾಳಿಗೆ ತಂಝೀಮ್ ತೀವ್ರ ಖಂಡನೆ
ಭಟ್ಕಳ: ಪುಲ್ವಾಮದಲ್ಲಿ 40 ಮಂದಿ ಸೈನಿಕರ ಮೇಲೆ ನಡೆದ ಭಯೋತ್ಪಾದನಾ ಧಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಟ್ಕಳದ ಮಜ್ಲಿಸೆ ...
ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ
ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್ಗೆ ಸೀಮಿತಗೊಳಿಸುವ ...
ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ದಿ ...
ಕಾಂಗ್ರೇಸ್ ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷರಾಗಿ ಅಬ್ದುಲ್ ಮಜೀದ್
ಭಟ್ಕಳ: ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾಗಿ ಭಟ್ಕಳ ತಾಲೂಕಿನ ಬೆಳಲಖಂಡದ ಅಬ್ದುಲ್ ಮಜೀದ್ ಅಮೀರ್ ಸಾಬ್ ...
ಪುಲ್ವಾಮದಲ್ಲಿ ನಡೆದ ಯೋಧರ ಹತ್ಯೆ ಮಾನವೀಯತೆಯ ಹತ್ಯೆಯಾಗಿದೆ-ರಾಬಿತಾ ಮಿಲ್ಲತ್
ಭಟ್ಕಳ: ಫೆ.೧೪ರಂದು ದೇಶದ ಕಣಿವೆ ರಾಜ್ಯ ಕಾಶ್ಮಿರದ ಪುಲ್ವಾಮ ದಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ನಾವು ತೀವ್ರವಾಗಿ ...
ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ
ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...
ಪುಲ್ವಾಮ ಆತ್ಮಾಹುತಿ ಉಗ್ರದಾಳಿಗೆ ತಂಝೀಮ್ ತೀವ್ರ ಖಂಡನೆ
ಭಟ್ಕಳ: ಪುಲ್ವಾಮದಲ್ಲಿ 40 ಮಂದಿ ಸೈನಿಕರ ಮೇಲೆ ನಡೆದ ಭಯೋತ್ಪಾದನಾ ಧಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಟ್ಕಳದ ಮಜ್ಲಿಸೆ ...
'ಬಿಜೆಪಿಯವರು ಜನವಿರೋಧಿಗಳು. ಅವರನ್ನು ನಂಬಬೇಡಿ’- ಸಿದ್ದರಾಮಯ್ಯ
ಶ್ರೀನಿವಾಸಪುರ: ಸಮಾಜದ ಎಲ್ಲ ಸಮುದಾಯಗಳಿಗೂ ಸಮುದಾಯ ಭವನ ಬಳಕೆಗೆ ಯೋಗ್ಯವಾಗಿದೆ. ಆದ್ದರಿಂದಲೇ ನಮ್ಮ ಸರ್ಕಾರ ಎಲ್ಲ ವರ್ಗದ ಜನರಿಗೂ ...
ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ
ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್ಗೆ ಸೀಮಿತಗೊಳಿಸುವ ...
ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ದಿ ...