ಶ್ರೀನಿವಾಸಪುರ: ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದ ವಕೀಲರ ಸಂಘಕ್ಕೆ ಗುರುವಾರ ನಡೆದ ವಾರ್ಷಿಕ ಚುನಾವಣೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾಗಿ ಎನ್.ವಿ.ಜಯರಾಮೇಗೌಡ (ಅಧ್ಯಕ್ಷ), ಕೆ.ಎಸ್.ಶ್ರೀನಿವಾಸಶೆಟ್ಟಿ (ಕಾರ್ಯದರ್ಶಿ), ಎನ್.ಮಂಜುನಾಥರೆಡ್ಡಿ (ಉಪಾಧ್ಯಕ್ಷ), ಆರ್.ಶಿವಣ್ಣ (ಜಂಟಿ ಕಾರ್ಯದರ್ಶಿ), ಟಿ.ವಿ.ನಾರಾಯಣಸ್ವಾಮಿ ( ಖಜಾಂಚಿ) ಪಿ.ಸಿ.ನಾರಾಯಣಸ್ವಾಮಿ, ಜಿ.ವೆಂಕಟರವಣ, ಜಿ.ವಿ.ರಮೇಶ್ ಬಾಬು, ಜೆ.ಎನ್.ಶಂಕರಪ್ಪ ನಾಯಕ್, ಈಸರತ್ ಪಾತಿಮಾ (ಕಾರ್ಯಕಾರಿ ಸಮಿತಿ ಸದಸ್ಯರು) ಅವಿರೋಧ ಆಯ್ಕೆಯಾಗಿದ್ದಾರೆ.
ಜೆ.ಎನ್.ಅಶ್ವತ್ಥರೆಡ್ಡಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಟಿ.ವೆಂಕಟೇಶ್, ವಕೀಲರಾದ ವಿನಯ್ ಕುಮಾರ್, ಮುರಳಿ, ರಾಧಾಕೃಷ್ಣ, ರೂಪಾ, ಅರ್ಜುನ್, ನಾರಾಯಣಸ್ವಾಮಿ ಇದ್ದರು.