ಭಟ್ಕಳ: ಎಸ್.ಡಿ.ಪಿ.ಐ ಉ.ಕ.ಜಿಲ್ಲಾಧ್ಯಕ್ಷರಾಗಿ ಭಟ್ಕಳದ ಮುಹಮ್ಮದ್ ತೌಫೀಖ್ ಬ್ಯಾರಿ ಆಯ್ಕೆಗೊಂಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತ್ತಿಚೆಗೆ ಸಿರ್ಸಿಯಲ್ಲಿ ಎಸ್.ಡಿ.ಪಿ.ಐ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಆರಿಫ್ ರಝಾ, ಉಪಾಧ್ಯಕ್ಷರಾಗಿ ಮುಖ್ತಾರ್ ಖಾಝಿ, ಕಾರ್ಯದರ್ಶಿಯಾಗಿ ಮುಹಮ್ಮದ್ ಷರೀಫ್ ಶೇಖ್, ಖಜಾಂಚಿಯಾಗಿ ಝಹೀರ್ ಆಹ್ಮದ್ ಶೇಖ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಕಿಫ್ ಗವಾಯಿ ಮತ್ತು ಅಬ್ದುಲ್ ಅಝೀಮ್ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.