ಹೊಸದಿಲ್ಲಿ: 2027ರ ವೇಳೆಗೆ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಜನಸಂಖ್ಯೆ ಹೆಚ್ಚಳದ ಪಿತೂರಿ ನಡೆಸಲಾಗುತ್ತಿದೆ ಎಂದು ಹಿಂದೂ ಯುವವಾಹಿನಿಯ ನಾಯಕನೊಬ್ಬ ನೀಡಿದ ಹೇಳಿಕೆ ವಿವಾದವನ್ನು ಹುಟ್ಟುಹಾಕಿದೆ.
ಹಿಂದೂ ಯುವವಾಹಿನಿಯನ್ನು 2002ರಲ್ಲಿ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಸ್ಥಾಪಿಸಿದ್ದು, ಇದೀಗ ಅವರು ಈ ಸಂಘಟನೆಯ ಮುಖ್ಯ ಪೋಷಕರಾಗಿದ್ದಾರೆ.
“ಇದೇ ರೀತಿಯಲ್ಲಿ ಮುಸ್ಲಿಮ್ ಜನಸಂಖ್ಯೆ ಹೆಚ್ಚುತ್ತಾ ಹೋದರೆ 2027ರಲ್ಲಿ ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿದೆ. ಇದು ಮುಸ್ಲಿಮ್ ಸಮುದಾಯದ ಪಿತೂರಿಯಾಗಿದೆ. ಭಾರತದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಲು ಅವರು ಬಯಸುತ್ತಿದ್ದಾರೆ” ಎಂದು ಹಿಂದೂ ಯುವವಾಹಿನಿ ನಾಯಕ ನಾಗೇಂದ್ರ ಪ್ರತಾಪ್ ತೋಮರ್ ಎಂಬಾತ ಹೇಳಿದ್ದಾನೆ,