ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.), ಮುರ್ಡೇಶ್ವರದ ವತಿಯಿಂದ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಉತ್ತರ ಕನ್ನಡ, ಕಾರವಾರರವರ ಸಹಯೋಗದಲ್ಲಿ, “ಯುವ-ಸ್ಪಂದನ” ಕಾರ್ಯಕ್ರಮವನ್ನು, ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.) ದ “ವಿಸ್ಮಿತಾ” ಸಭಾಭವನದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ, ಮುರ್ಡೇಶ್ವರ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್. ಮಂಜುನಾಥ ನಾಯ್ಕ ರವರು ಉದ್ಘಾಟಕರಾಗಿ ಆಗಮಿಸಿದ್ದರು. ಸಂಸ್ಥೆಯ ಯೋಜನಾ ನಿರ್ದೇಶಕಿಯರಾದ ಶ್ರೀಮತಿ ಆಶಾ ಕಾಮತ್ರವರು ಹಾಗೂ ಸಂಸ್ಥೆಯ ಇನ್ನೋರ್ವ ನಿರ್ದೇಶಕಿಯರಾದ ಚಂದ್ರಕಲಾ ಕಾಮತ್ ರವರ ವೇದಿಕೆಯಲ್ಲಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.) ದ ಅಧ್ಯಕ್ಷರಾದ ಶ್ರೀ ಎಸ್. ಎಸ್. ಕಾಮತ್ ರವರು ವಹಿಸಿದ್ದರು. ಸಂಸ್ಥೆಯ ವಿದ್ಯಾರ್ಥಿನಿ ಶ್ರೀಮತಿ ವೀಣಾ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್.ಎಸ್.ಕಾಮತ್ ರವರು, ತಮ್ಮ ಪ್ರಾಸ್ಥ್ತಾವಿಕ ನುಡಿಗಳಲ್ಲಿ “ಯುವ-ಸ್ಪಂದನ” ಕಾರ್ಯಕ್ರಮದ ಕುರಿತಾಗಿ, ಸಂಪೂರ್ಣ ವಿವರಗಳನ್ನು ನೀಡಿ, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ, ಶಿಬಿರಾರ್ಥಿಗಳಿಗೆ ಕರೆ ನೀಡುವುದರ ಮೂಲಕ ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ನಂತರ ಉದ್ಘಾಟಕರೊಂದಿಗೆ, ಸಭಾ ಗಣ್ಯರೆಲ್ಲರೂ ಸೇರಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನೆಯ ನಂತರ “ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ” ಯ ವತಿಯಿಂದ ಕು. ನಮಿತಾ ಎಂ. ಬಾಂದೇಕರ್ , ಯುವ ಸಮಾಲೋಚಕಿ ಹಾಗೂ ಕು. ಸೋನಿಯಾ ಆರ್. ಘೋಡ್ಕೆರವರು, ಆರೋಗ್ಯ, ಜೀವನಶೈಲಿ, ಭಾವನೆಗಳನ್ನು ನಿಭಾಯಿಸುವುದು, ಕುಟುಂಬ, ಸಮಾಜ ಹಾಗೂ ಸ್ನೇಹಿತರೊಂದಿಗಿನ ಸಂಬಂಧ, ಮಾರ್ಗದರ್ಶನ, ನೆರೆ-ಹೊರೆಯವರೊಡನೆ ಸಂಬಂಧ ಈ ಎಲ್ಲಾ ವಿಷಯಗಳ ಮೇಲೆ ಕೆಲವು ಮಾದರಿ ಆಟಗಳೊಂದಿಗೆ, ವಿದ್ಯಾರ್ಥಿಗಳಿಗೆ ತಿಳಿಯಪಡಿಸಿ, ಯುವ-ಸ್ಪಂದನ ಕೇಂದ್ರದ ಸಂಪೂರ್ಣ ವಿವರಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಬಹು ಸಂಖೆಯಲ್ಲಿ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ, ಸಲಹೆ-ಸೂಚನೆಗಳನ್ನು ಪಡೆದುಕೊಂಡು, ಈ ಬಗ್ಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕೆಲವು ವಿದ್ಯಾರ್ಥಿಗಳು, ಈ ಕಾರ್ಯಕ್ರಮದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಕಾರ್ಯಕ್ರಮವನ್ನು ಸಂಸ್ತೆಯ ಪ್ರಾಚಾರ್ಯೆ ಲತಾ ನಾಯ್ಕ ನಿರೂಪಿಸಿದರು. ಸಂಸ್ಥೆಯ ಶಿಕ್ಷಕಿ ಗುಲಾಬಿ ದೇವಾಡಿಗ ವಂದಿಸಿದರು.