ಭಟ್ಕಳ:"ಲಯನ್ಸ್ ಕ್ಲಬ್ ಮುರ್ಡೇಶ್ವರ"ದ ವತಿಯಿಂದ "ಮಕ್ಕಳ ಹಕ್ಕು" ಕುರಿತಾದ ಭಾಷಣ ಸ್ಪರ್ಧೆ

Source: radhakrishna | By Arshad Koppa | Published on 16th November 2017, 8:38 AM | Coastal News |

ಭಟ್ಕಳ: "ಲಯನ್ಸ್ ಕ್ಲಬ್ ಮುರ್ಡೇಶ್ವರ"ದ ವತಿಯಿಂದ  ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಸಗೇರಿಯ ಮಕ್ಕಳಿಗೆ "ಮಕ್ಕಳ ಹಕ್ಕು" ಕುರಿತಾದ ಭಾಷಣ ಸ್ಪರ್ಧೆ ನಡೆಸಿ ಬಹುಮಾನ ವಿತರಿಸುವುದರ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಿದರು. 
ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ ನಾಯ್ಕ ಅವರು ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವನ್ನು  ಉದ್ಘಾಟಿಸಿದರು. 
ಲಯನ್ ಸದಸ್ಯ  ನಾಗೇಶ ಮಡಿವಾಳ, ಮಂಜುನಾಥ ದೇವಡಿಗ, ಎ.ಎನ್. ಶೆಟ್ಟಿ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಜಯಂತ ಮರಾಠಿ ಉಪಸ್ಥಿತರಿದ್ದರು. 


ಲಯನ್ಸ ಕ್ಲಬ್ ವತಿಯಿಂದ ಶಾಲೆಗೆ ವಸ್ತುರೂಪದ ದೇಣಿಗೆ ನೀಡಲಾಯಿತು.  ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ,  ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನ ವಿತರಿಸಲಾಯಹಿತು. ಮುಖ್ಯ ಶಿಕ್ಷಕಿ ಸುಜಾತಾ ಪ್ರಭು ಸ್ವಾಗತಿಸಿದರು. ಶಿಕ್ಷಕಿ ಶೈಲಾ ಶೆಟ್ಟಿ ವಂದಿಸಿದರು. 

Read These Next