ಭಟ್ಕಳ: ಮುರುಡೇಶ್ವರದ ಸಮುದ್ರ ದಡದಲ್ಲಿ ಈಜಾಡುತ್ತಿದ್ದ ಪ್ರವಾಸಿಯೊಬ್ಬರು ಸಮುದ್ರದಲೆಗೆ ಸಿಲುಕಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಗ ಉ.ಕ.ಜಿಲ್ಲಾಡಳಿತದಿಂದ ನಿಯುಕ್ತಿಗೊಂಡಿರುವ ಲೈಪ್ ಗಾರ್ಡ್ ಗಳ ಕೂಡಲೆ ಸಮುದ್ರಪಾಲಾಗುತ್ತಿದ್ದ ವ್ಯಕ್ತಿಯನ್ನು ಉಳಿಸಿ ಆತನಿಗೆ ”ಲೈಫ್’ ನೀಡಿದ ಘಟನೆ ರವಿವಾರ ಮುರುಡೇಶ್ವರದಲ್ಲಿ ನಡೆದಿದೆ.
ಪ್ರಾಣಾಪಾಯದಿಂದ ಪಾರಾದ ಪ್ರವಾಸಿಯನ್ನು ತಮಿಳುನಾಡಿನ ಜೈಕಾಂತ್(೨೨) ಎಂದು ಗುರುತಿಸಲಾಗಿದ್ದು, ಇವರು ಸಮುದ್ರದಲ್ಲಿ ಈಜಾಡುತ್ತಿದ್ದಾಗ ಅಕಸ್ಮಿಕವಾಗಿ ಬಂದ ಅಲೆಯೊಂದು ಅವರನ್ನು ಸಮುದ್ರದಲ್ಲಿ ಮುಳುಗಿಸಿ ಸಾವೆನೆಡೆ ಸೆಳೆದುಕೊಂಡು ಹೋಗುತ್ತಿತ್ತು ಎನ್ನಲಾಗಿದ್ದು ಅಲ್ಲೆ ಕರ್ತವ್ಯನಿರತರಾಗಿದ್ದ ಲೈಫ್ ಗಾರ್ಡ್ ರೋಹಿತ್ ಮತ್ತು ಜಯರಾಂ ಎನ್ನುವವರೂ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಮುದ್ರಪಾಲಾಗುತ್ತಿದ್ದ ಜಯಂತ್ ರನ್ನು ಸುರಕ್ಷಿತವಾಗಿ ದಡಕ್ಕೆ ತರುವಲ್ಲಿ ಯಶಸ್ವಿಯಾದರು ಎಂದು ಹೇಳಲಾಗಿದೆ.
ಪ್ರವಾಸಿಗರು ಸಮುದ್ರದಲ್ಲಿ ಸಿಲುಕಿ ಸಾಯುವ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಇಲ್ಲಿನ ಜಿಲ್ಲಾಡಳಿತ ಕಾರವಾರ, ಗೋಕರ್ಣ ಹಾಗೂ ಮುರುಡೇಶ್ವರ ದಲ್ಲಿ ಪ್ರವಾಸಿಗರ ಸುರಕ್ಷೆಗೆಂದೇ ಲೈಫ್ ಗಾರ್ಡ್ಗಳನ್ನು ನೇಮಿಸಿದೆ. ಕೆಲ ದಿನಗಳ ಹಿಂದೆ ಗೋಕರ್ಣದಲ್ಲಿಯೂ ಲೈಫ್ ಗಾರ್ಡ್ಗಳು ಸಮುದ್ರಪಾಲಾಗುತ್ತಿದ್ದ ಪ್ರವಾಸಿಗರನ್ನು ರಕ್ಷಿಸಿದ ಬೆನ್ನಲ್ಲೆ ಮುರಡೇಶ್ವರದ ಲೈಫ್ ಗಾರ್ಡ್ಗಳಿಂದಲೂ ಪ್ರವಾಸಿಗರ ಪ್ರಾಣಾ ರಕ್ಷಣೆಯಾಗಿದೆ. ಇದಕ್ಕಾಗಿ ಜನರು ಉತ್ತರಕನ್ನಡ ಜಿಲ್ಲಾಡಳಿತವನ್ನು ಅಭಿನಂದಿಸಿದ್ದಾರೆ.