ಮುಂಡಗೋಡ : ಟ್ರ್ಯಾಕ್ಟರ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ತಾಲೂಕಿನ ಮುಂಡಗೋಡ-ಬಂಕಾಪುರ ರಸ್ತೆ ಸ್ಮಶಾನದ ಸನೀಹ ಇಂದು ನಡೆದಿದೆ.
ಮೃತಪಟ್ಟ ಬೈಕ್ ಸವಾರನನ್ನು ಯಲ್ಲಪ್ಪ ಸುರಸಟ್ಟಿಕೊಪ್ಪ(೩೮) ಎಂದು ಹೇಳಲಾಗಿದೆ ಬೈಕ್ ಸವಾರ ಮುಂಡಗೋಡ ತಾಲೂಕಿನ ಹುನಗುಂದ ಪಂಚಾಯತಿ ವ್ಯಾಪ್ತಿಯ ಅಗಡಿ ಗ್ರಾಮದವ ಎಂದು ಹೇಳಲಾಗಿದೆ.
ಟ್ರ್ಯಾಕ್ಟರ ಬಂಕಾಪುರ ದಿಕ್ಕಿಗೆ ಹೊರಟಿದ್ದು ಎನ್ನಲಾಗಿದ್ದು ಬೈಕ್ ಸವಾರ ಮುಂಡಗೋಡ ಗೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಪಿಆಯ್ ಕಿರಣಕುಮಾರ ನಾಯಕ್ ಹಾಗೂ ಪಿಎಸ್ಆಯ್ ಲಕ್ಕಪ್ಪ ನಾಯಕ ಭೇಟಿ ನೀಡಿ ಪರಿಶೀಲಿಸಿದ್ದಾರೆ