ಕರ್ತವ್ಯಲೋಪ : ತಹಶೀಲ್ದಾರ ಕಚೇರಿ ಸಿಬ್ಬಂದಿ ಅಮಾನತ್
ಮುಂಡಗೋಡ: ಕರ್ತವ್ಯ ಲೋಪ ಮತ್ತು ಸಾರ್ವಜನಿಕರ ಅರ್ಜಿಯ ವಿಲೆವಾರಿ ಮಾಡುವಲ್ಲಿ ವಿಳಂಬ ಮಾಡುತ್ತಿದ್ದ ಇಲ್ಲಿನ ತಹಶೀಲ್ದಾರ ಕಛೇರಿಯ ಎಸ್.ಡಿ.ಎ. ಸಿಬ್ಬಂದಿಯನ್ನು ಜಿಲ್ಲಾಧಿಕಾರಿಗಳು ಈ ತಕ್ಷಣದಿಂದ ಅಮಾನತುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಅನೀಲ ವಿ. ಅಂಕೋಲೆಕರ್, ಅಮಾನತಾದ ಇಲ್ಲಿನ ತಹಶೀಲ್ದಾರ ಕಛೇರಿಯ ಎಸ್.ಡಿ.ಎ ಸಿಬ್ಬಂದಿ. ಸರಕಾರಿ ಕೆಲಸ ನಿರ್ವಹಿಸದೇ ಸರಕಾರಿ ಕೆಲಸಕ್ಕೆ ವಿಳಂಬ ಮಾಡಿ ಮತ್ತು ಅನಧೀಕೃತ ಗೈರಾಗಿ ಸಾರ್ವಜನಿಕರ ಕೆಲಸ ಕಾರ್ಯಾಗಳಿಗೆ ಅಡ್ಡಿಯುಂಟು ಮಾಡಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಅಮಾನತು ಆದೇಶ ಹೊರಡಿಸಿದ್ದಾರೆ. ಸದ್ರೀಯವನು ಸರಕಾರಿ ಸೇವೆಯಲ್ಲಿ ಇದು ಎರಡನೇ ಅಮಾನತ್ ವಾಗಿದೆ ಎಂದು ಹೇಳಲಾಗಿದೆ.