ಕರ್ತವ್ಯಲೋಪ : ತಹಶೀಲ್ದಾರ ಕಚೇರಿ ಸಿಬ್ಬಂದಿ ಅಮಾನತ್

Source: sonews | By Staff Correspondent | Published on 20th July 2017, 10:35 PM | Coastal News |

ಮುಂಡಗೋಡ: ಕರ್ತವ್ಯ ಲೋಪ ಮತ್ತು ಸಾರ್ವಜನಿಕರ ಅರ್ಜಿಯ ವಿಲೆವಾರಿ ಮಾಡುವಲ್ಲಿ ವಿಳಂಬ ಮಾಡುತ್ತಿದ್ದ ಇಲ್ಲಿನ ತಹಶೀಲ್ದಾರ ಕಛೇರಿಯ ಎಸ್.ಡಿ.ಎ. ಸಿಬ್ಬಂದಿಯನ್ನು ಜಿಲ್ಲಾಧಿಕಾರಿಗಳು ಈ ತಕ್ಷಣದಿಂದ  ಅಮಾನತುಗೊಳಿಸಿದ್ದಾರೆ ಎಂದು  ತಿಳಿದು ಬಂದಿದೆ. 
ಅನೀಲ ವಿ. ಅಂಕೋಲೆಕರ್, ಅಮಾನತಾದ ಇಲ್ಲಿನ ತಹಶೀಲ್ದಾರ ಕಛೇರಿಯ ಎಸ್.ಡಿ.ಎ ಸಿಬ್ಬಂದಿ.  ಸರಕಾರಿ ಕೆಲಸ ನಿರ್ವಹಿಸದೇ ಸರಕಾರಿ ಕೆಲಸಕ್ಕೆ ವಿಳಂಬ ಮಾಡಿ ಮತ್ತು ಅನಧೀಕೃತ ಗೈರಾಗಿ ಸಾರ್ವಜನಿಕರ ಕೆಲಸ ಕಾರ್ಯಾಗಳಿಗೆ ಅಡ್ಡಿಯುಂಟು ಮಾಡಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಅಮಾನತು ಆದೇಶ ಹೊರಡಿಸಿದ್ದಾರೆ. ಸದ್ರೀಯವನು ಸರಕಾರಿ ಸೇವೆಯಲ್ಲಿ ಇದು ಎರಡನೇ ಅಮಾನತ್ ವಾಗಿದೆ ಎಂದು ಹೇಳಲಾಗಿದೆ. 

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...