ಮುಂಡಗೋಡ: ವಿದ್ಯಾರ್ಥಿಯೋರ್ವ ನಾಪತ್ತೆಯಾದ ಘಟನೆ ತಾಲೂಕಿನ ಕೋಡಂಬಿ ಗ್ರಾಮದಲ್ಲಿ ನಡೆದಿದೆ.
ಪ್ರಶಾಂತ ರಮೇಶ ಭಜಂತ್ರಿ(17) ಕಾಣೆಯಾದ ವಿದ್ಯಾರ್ಥಿಯಾಗಿದ್ದಾನೆ. ಜನವರಿ 7ರ ರಾತ್ರಿ ಸುಮಾರು 8.30ಕ್ಕೆ ಕ್ಕೆ ಅಜ್ಜಿ ಮನೆಗೆ ಹೋಗಿಬರುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆ ಇತನ ಇರುವಿಕೆಯ ಕುರಿತು ಸ್ನೇಹಿತರು, ಸಂಬಂದಿಕರನ್ನು ವಿಚಾರಿಸಲಾಗಿ ಎಲ್ಲಿಯೂ ಇತನ ಇರುವಿಕೆ ಪತ್ತೆಯಾಗಿಲ್ಲ.ಇತ್ತ ಈ ತನಕವೂ ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ರಮೇಶ ಭಜಂತ್ರಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.