ಮುಂಡಗೋಡ : ಹಾವು ಕಚ್ಚಿ ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಚೌಡಳ್ಳಿ ಗ್ರಾಮದಲ್ಲಿ ನಡೆದಿದೆ
ಮೃತಪಟ್ಟ ಯುವಕನನ್ನು ಚೌಡಳ್ಳಿ ಗ್ರಾಮದ ರವಿ ಪರುಷರಾಮ ಗೋಸಾವಿ(18) ಎಂದು ತಿಳಿದು ಬಂದಿದೆ. ಈತ ಗುಜರಿ ವ್ಯಾಪಾರ ಮಾಡತ್ತಿದ್ದನು ಎಂದು ಹೇಳಲಾಗಿದೆ.
ಮನೆಯಲ್ಲಿ ಮಲಗಿದ್ದಾಗ ಭಾನುವಾರ ಬೆಳಗಿನ ಜಾವ ಸುಮಾರು 2 ಗಂಟೆಗೆ ಯಾವುದೋ ವಿಷಕಾರಿ ಹಾವು ಕಚ್ಚಿದೆ ಎಂದು ಹೇಳಲಾಗಿದೆ ಅದೇ ದಿನ ಮುಂಡಗೋಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ