ಮುಂಡಗೋಡ: ೨೦೧೭-೧೮ ನೇ ಸಾಲಿನ ಮುಂಡಗೋಡ ರೋಟರಿ ಕ್ಲಬ್ ಹೆರಿಟೇಜ್ ನೂತನ ಅಧ್ಯಕ್ಷರಾಗಿ ಸೀತಾರಾಮ ಬೋರ್ಕರ, ಕಾರ್ಯದರ್ಶಿ ವಸಂತ ಕೊಣಸಾಲಿ, ಕೋಶಾಧ್ಯಕ್ಷ ಪಿ.ಪಿ ಛಬ್ಬಿ ಪಟ್ಟಣದ ಟ್ರಿನಿಟಿ ಸಭಾಂಗಣದಲ್ಲಿ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷರಾಗಿ ಸೀತಾರಾಮ ಬೋರ್ಕರಅವರು ನಾನು ಸಮಾಜಕ್ಕೆ ಏನು ಒಳ್ಳೆಯ ಮಾಡಿದ್ದೇನೆ ಅರಿವುದು ಮುಖ್ಯವಾಗಿದೆ ಎಂದ ಅವರು ಮುಂದಿನ ಒಂದು ವರ್ಷಗಳ ಕಾಲ ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತಾಲೂಕಿನ ಸಿದ್ದಿ, ಗೌಳಿ, ಲಂಬಾಣಿ ಸೇರಿದಂತೆ ಹಿಂದುಳಿದವರ ಬಡಾವಣೆಗಳಲ್ಲಿ ಸಭೆ ನಡೆಸಿ ಸಾರ್ವಜನಿಕ ಕುಂದು ಕೊರತೆ ಬಗ್ಗೆ ಅವಲೋಕಿಸಿ ಕಟ್ಟ ಕಡೆಯ ಜನರಿಗೂ ಅಗತ್ಯ ಮೂಲಭೂತ ಸೌಲಭ್ಯ ಗಳನ್ನು ಒದಗಿಸಿಕೊಡುವಂತಹ ಯೋಜನೆ ರೂಪಿಸಲಾಗುವುದೆಂದು ಹೇಳಿದರು.
ರೋಟರಿ ಕ್ಲಬ್ ಪದಗ್ರಹಣ ಅಧಿಕಾರಿ ಗಣೇಶ ಕುರ್ಸೆ ಮಾತನಾಡಿದರು ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಅಶೋಕ ಹಬೀಬ ಮಾತನಾಡಿ, ಬೇರೆವರಿಗೋಸ್ಕರ ಯಾರು ಬದುಕುತ್ತಾರೊ ಅಂತಹವನ್ನು ಸಮಾಜ ಎಂದಿಗೂ ಕೈಬಿಡುವುದಿಲ್ಲ.
ನಿಕಟಪೂರ್ವ ಅಧ್ಯಕ್ಷ ಸತೀಶ ಕುರ್ಡೇಕರ ಅಧಿಕಾರ ಹಸ್ತಾಂತರಿಸಿದರು. ನೂತನ ಕಾರ್ಯದರ್ಶಿ ವಸಂತ ಕೊಣಸಾಲಿ, ಕೋಶಾಧ್ಯಕ್ಷ ಪಿ.ಪಿ ಛಬ್ಬಿ ಉಪಸ್ಥಿತರಿದ್ದರು. ವಸಂತ ಕೊಣಸಾಲಿ ಸ್ವಾಗತಿಸಿದರು. ಸೋಮಪ್ಪ ಮುಡೆಣ್ಣವರ ನಿರೂಪಿಸಿದರು. ಸಮಾರಂಭದಲ್ಲಿ ರೋಟರಿ ಹೇರಿಟೇಜ ಸದಸ್ಯರು ಉಪಸ್ಥಿತರಿದ್ದರು
Read These Next
ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.
ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧದ ಬಿಜೆಪಿಗರ ಆರೋಪ ಅಪ್ಪಟ ಸುಳ್ಳು: ಶಂಭು ಶೆಟ್ಟಿ
ಕಾರವಾರ: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಮಹಾರಾಷ್ಟ್ರ ಪರ ಮಾತನಾಡಿದ್ದಾರೆ ಎಂದು ಬಿಜೆಪಿಗರು ...
ಮಾಜಿ ಶಾಸಕಿ ಶಾರದಾ ಶೆಟ್ಟಿ ಮತ್ತೆ ಕಾಂಗ್ರೆಸ್ಗೆ
ಕುಮಟಾ: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಶುಕ್ರವಾರ ಮರಳಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ...
ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ
ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...
ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...
ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ
ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...