ರಸ್ತೆ ಅಪಘಾತ : ಬೈಕ್ ಸವಾರ ಸಾವು
ಮುಂಡಗೋಡ : ಬೈಕ್ ಗೆ ಕಾರ ಹಾಗೂ ವೆಗೆನಾರ ವಾಹನ ಅಪಘಾತ ಪಡಿಸಿದ್ದರಿಂದ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಕಾತೂರ ಗ್ರಾಮದ ಫಾರೆಸ್ಟ ವಸತಿ ಗೃಹಗಳ ಹತ್ತಿರ, ಹುಬ್ಬಳ್ಳಿ-ಶಿರಸಿ(ರಾ.ಹೆ69) ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ
ಮೃತಪಟ್ಟ ಬೈಕ್ ಸವಾರನನ್ನು ಮುಂಡಗೋಡ ಪಟ್ಟಣದ ಕಲಾಲ ಓಣಿ ನಿವಾಸಿ ಜಹಾಂಗೀರ ಮಕ್ತುಂಸಾಬ ನಂದಿಗಟ್ಟಿ(52) ಎಂದು ಗುರುತಿಸಲಾಗಿದೆ. ಈತ ವೃತ್ತಿಯಿಂದ ಚಾಲಕನಾಗಿದ್ದ.
ಅಪಘಾತ ಪಡಿಸಿದ ಚಾಲಕ ( ಆರೋಪಿ)ರನ್ನು 1)ಉಮಾಪತಿ ಹೆಗಡ(58) 2) ಅರಣ್ಯ ಇಲಾಖೆ ಸಿಬ್ಬಂದಿ ಬನವಾಸಿ ನಿವಾಸಿ, ದೊಡ್ಡಬಸಯ್ಯ ಶಿವಶಂಕರಯ್ಯ ಹಿರೇಮಠ(26) ಎಂದು ಗುರುತಿಸಿಲಾಗಿದೆ.
ಬೆಳಗ್ಗೆ ಬೈಕ್ ಸವಾರ ಮುಂಡಗೋಡ ದಿಂದ ಬೈಕನ್ನು ನಿಧಾನವಾಗಿ ಚಾಲಾಯಿಸಿಕೊಂಡು ಶಿರಸಿ ದಿಕ್ಕಿಗೆ ಹೊರಟಿದ್ದ ಎನ್ನಲಾಗಿದೆ. ಹೋಗುತ್ತಿದ್ದಾಗ ಶಿರಸಿಯಿಂದ ಮುಂಡಗೋಡ ಬರುತ್ತಿದ್ದ ಮೊದಲೆನೇ ಚಾಲಕ ಕೆ.ಎ 27 ಎಮ್ 3956 ಕಾರನ್ನು ಅತಿವೇಗವಾಗಿ ನಿಷ್ಕಾಳಜಿಯಿಂದ ಚಾಲಯಿಸಿಕೊಂಡು ಬಂದು ಬೈಕ್ ಗೆ ಅಪಘಾತ ಪಡಿಸಿದ್ದಾನೆ ಇದರಿಂದ ಬೈಕ್ ಸವಾರ ಬೈಕ್ ಸಮೇತವಾಗಿ ಕೆಳಗೆ ಬಿದ್ದಿದ್ದಾನೆ ಇದೇ ಸಮಯಕ್ಕೆ 2ನೇ ವಾಹನ ಚಾಲಕ ಕೆ.ಎ-04 ಎಮ್.ಆರ್-1150 ನೇ ನಂಬರಿನ ವಾಹನವನ್ನು ನಿಷ್ಕಾಳಜಿ ಹಾಗೂ ಅವಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ವಾಹನದ ವೇಗ ವನ್ನು ನಿಯಂತ್ರಿಸದೇ ಕೆಳಗೆ ಬಿದ್ದ ಬೈಕ್ ಸವಾರನಿಗೆ ಅಪಘಾತ ಪಡಿಸಿ ಬೈಕ್ ಸವಾರನನ್ನು ಸುಮಾರು 20 ಫೂಟುಗಳವರೆಗೆ ಮುಂದಕ್ಕೆ ಎಳೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗುತ್ತಿದ್ದು ಇದರಿಂದ ಬೈಕ್ ಸವಾರನಿಗೆ ಮುಖಕ್ಕೆ, ತಲೆಗೆ, ಎದೆಗೆ ಹಾಗೂ ಪಕ್ಕೆಲುಬಿಗೆ ಭಾರಿ ಮಾರಣಾಂತಿಕ ಗಾಯವಾಗಿದೆ. ಗಾಯಳುನನ್ನು ಆತನಿಗೆ ಅಪಘಾತ ಪಡಿಸಿದ(2ನೇ ಚಾಲಕ) ವಾಹನದಲ್ಲಿಯೇ ಚಿಕಿತ್ಸೆಗೆ ಮುಂಡಗೋಡಿನ ಖಾಸಗಿ ಆಸ್ಪತ್ರೆಗೆ ಕರೆದೋಯ್ಯಲಾಗಿದ್ದು ಎಂದು ಹೇಳಲಾಗಿದ್ದು ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕೆರೆದು ಹೋಗಲು ಸೂಚಿಸಿದ್ದರಿಂದ ಹುಬ್ಬಳ್ಳಿಗೆ ಸಾಗುತ್ತಿರುವಾಗ ಮಾರ್ಗ ಮಧ್ಯ ಬೈಕ್ ಸವಾರನ ಪ್ರಾಣ ಪಕ್ಷಿ ಹಾರಿಹೋಗಿದೆ ಎಂದು ಫಿರ್ಯಾದಿಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಎರಡು ಜನ ಚಾಲಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ