ಮುಂಡಗೋಡ : ಉತ್ತರಕನ್ನಡ ಜಿಲ್ಲೆಯು ಕೋಮು ಗಲಭೆಯಿಂದ ತತ್ತರಿಸಿ ಜನ ಸಾಮನ್ಯರಲ್ಲಿ ಭಯದ ವಾತಾವರಣ ಮನೆ ಮಾಡಿಕೊಂಡಿದ್ದು ಅವರಲ್ಲಿ ದೈರ್ಯ ತುಂಬುವ ನಿಟ್ಟಿನಲ್ಲಿ ಮುಂಡಗೋಡ ಪೊಲೀಸರು ಬುಧವಾರ ಪಥಸಂಚನ ನಡೆಸಿದರು.
ಸರಣಿ ಕೋಮುಗಲಭೆಗಳಲ್ಲಿ ತತ್ತರಿಸಿದ ಜಿಲ್ಲೆಯ ಜನತೆ, ತಮ್ಹೊಮ ಮೆನಯಿಂದ ಹೊರಗೆ ಬರಲಾರದೇ ಭಯದ ವಾತಾವರಣದಲ್ಲಿದ್ದಾರೆನ್ನಲಾಗುತ್ತಿದ್ದು ಭಯವನ್ನು ಪಡಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಪೊಲೀಸರು ಜನರಲ್ಲಿ ಧೈರ್ಯ ತುಂಬಲು ಮುಂಡಗೋಡದಲ್ಲಿ ಪಿಆಯ್ ಕಿರಣಕುಮಾರ ನಾಯಕ ನೇತೃತ್ವದಲ್ಲಿ ಪೊಲೀಸರು ಮುಖ್ಯ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.