ಸಾಲಬಾಧೆ; ದನಗಾಹಿ ನೇಣಿಗೆ ಶರಣು
ಮುಂಡಗೋಡ : ಸಾಲ ತೀರಿಸಲಾಗದೇ ದನಗಾಹಿಯೋರ್ವ ನೇಣಿಗೆ ಶರಣಾದ ಘಟನೆ ತಾಲೂಕಿನ ಪಾಳಾ ಗ್ರಾಮದಲ್ಲಿ ನಡೆದಿದೆ.ಪಾಳಾ ಗ್ರಾಮದ ಬಸಪ್ಪ ಚಲವಾದಿ(62) ನೇಣುಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ.
ಈ ತನ್ನ ಹಿರಿಯ ಮಗಳ ಮದುವೆ ಸಾಲಮಾಡಿದ್ದ ಎಂದು ಹೇಳಲಾಗಿದೆ. ಸಾಲ ತೀರಿಸುವುದು ಹೇಗಪ್ಪ ಎಂದು ಕೆಲವು ದಿನಗಳಿಂದ ಚಿಂತಿತನಾಗಿ ಮನಸ್ಸಿಗೆ ತುಂಬಾ ಹಚ್ಚಿಕೊಂಡಿದ್ದನು ಎಂದು ಹೇಳಲಾಗುತ್ತಿದೆ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ದನಕಾಯಲು ಹೋದವನು ಭದ್ರಾಪುರ ಗ್ರಾಮದವನ ಮಾವಿನ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮೃತನ ಪತ್ನಿ ಪೊಲೀಸ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ