ಮುಂಡಗೋಡ : ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಸಹಕಾರ ಸಂಘ ಸಾಕಷ್ಟು ಸುಧಾರಣೆಗೊಂಡಿದೆ ಎಂದು ರಾಜ್ಯದ ಸಹಕಾರ ಸಚಿವ ಎಚ್.ಎಸ್.ಮಹಾದೇವಪ್ರಸಾದ ಹೇಳಿದರು.
ಶನಿವಾರ ಅವರು ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ಶ್ರೀವೀರೇಶ್ವರ ಸೇವಾ ಸಹಕಾರಿ ಸಂಘದ ನೂತನ ವಾಣಿಜ್ಯ ಮಳಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
.ಉತ್ತರಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರ ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದೆ ಕಾಂಗ್ರೇಸ್ ಸರಕಾರ ಮೂರುವರೇ ವರ್ಷದಲ್ಲಿ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡಿ ಬದಲಾವಣೆಗಳನ್ನು ಮತ್ತು ಸುಧಾರಣೆಗಳನ್ನು ಮಾಡತಕ್ಕಂತಹ ಕೆಲಸ ಮಾಡಿದೆ. ಮೂರು ಲಕ್ಷರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುವ ವ್ಯವಸ್ಥೆ ಮಾಡಿದ್ದೇವೆ. ೩ಲಕ್ಷರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುವ ಏಕೈಕ ರಾಜ್ಯವೆಂದರೆ ಕರ್ನಾಟಕ ಎಂದರು.
ಇಂದು ೩೭ಸಾವಿರ ಸಹಕಾರಿ ಸಂಘಗಳು ನಮ್ಮ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ರಾಜ್ಯದ ಸಿದ್ದರಾಮಯ್ಯನವರ ಸರ್ಕಾರ ಬಡವರಿಗೆ, ರೈತರಿಗೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ವೇದಿಕೆಯ ಮೇಲೆ ಕೆ.ಡಿ.ಸಿ.ಸಿ.ಬ್ಯಾಂಕ ನಿರ್ದೇಶಕರದ ಪಿ.ಎಸ್.ಸಂಗೂರಮಠ, ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಟಿ.ಪಾಟೀಲ, ಜಿ.ಪಂ.ಸದಸ್ಯ ರವಿಗೌಡ ಪಾಟೀಲ, ಸಹಕಾರಿ ಸಂಘಗಳ ಉಪ ನಿಬಂಧಕರಾದ ಜಯಪ್ರಕಾಶ ಹೆಗಡೆ, ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ, ಗ್ರಾ.ಪಂ.ಅಧ್ಯಕ್ಷ ಶಂಕ್ರಪ್ಪ ಗಳಗಿ, ತಾ.ಪಂ.ಸದಸ್ಯೆ ಸುನಿತಾ ಲಮಾಣಿ, ಮುಖಂಡರಾದ ಬಸವರಾಜ ಅಸ್ತಕಟ್ಟಿ ಎಚ್.ಎಂ.ನಾಯ್ಕ, ಕೆ.ಆರ್.ಬಾಳೆಕಾಯಿ, ಸಿದ್ದಪ್ಪ ಹಡಪದ ಇದ್ದರು. ಆರಂಭದಲ್ಲಿ ಮುಖಂಡರಾದ ಎಚ್.ಎಂ.ನಾಯ್ಕ ಸ್ವಾಗತಿಸಿದರು.