ಸಿಡಿಲು ಬಡಿದು ರೈತ ಸಾವು

Source: sonews | By Staff Correspondent | Published on 25th May 2017, 4:39 PM | Coastal News | Don't Miss |

ಮುಂಡಗೋಡ :  ಸಂಜೆ ಸಿಡಿಲು ಬಡಿದು ರೈತನೊಬ್ಬ ಸಾವನ್ನಪ್ಪಿದ್ದ ಘಟನೆ ತಾಲೂಕಿನ ಬಾಚಣಕಿ ಜಲಾಶಯದ ಹತ್ತಿರ ಮಂಗಳವಾರ  ಸಂಜೆ ಸಂಭವಿಸಿದೆ.
ಮೃತಪಟ್ಟ ರೈತನನ್ನು  ಮಜ್ಜ್ಜಿಗೇರಿ ಗ್ರಾಮದ ಹನ್ಮಂತಪ್ಪ ಸಿದ್ದಪ್ಪ ನೂಲ್ವಿ(೫೦) ಎಂದು ತಿಳಿದು ಬಂದಿದೆ. ಪ್ರತಿದಿನವೂ ಈತ ತನ್ನ ಗದ್ದೆಗೆ ಹೋಗುವಾಗ ಕುರಿಗಳೊಂದಿಗೆ ಹೋಗುತ್ತಿದ್ದನು ಎನ್ನಲಾಗಿದೆ  ಕುರಿಗಳನ್ನು  ಮೇಯಿಸಿಕೊಂಡು ಮನೆಗೆ ಹಿಂದುರಗುತ್ತಿದ್ದ ವೇಳೆ ಬಾಚಣಕಿ ಡ್ಯಾಂ ಹತ್ತಿರ ಈತನಿಗೆ ಸಿಡಿಲು ಬಡಿದಿದೆ. ಸಿಡಿಲಿನ ಆಘಾತಕ್ಕೆ ರೈತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ ಅಶೋಕ ಗುರಾಣಿ, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...