ಅನಧಿಕೃತ ಕಲ್ಲುಕೊರೆ : ಐದು ಆರೋಪಿಗಳು ಪೊಲೀಸರ ವಶಕ್ಕೆ

Source: S O News service | By Staff Correspondent | Published on 22nd February 2017, 8:06 PM | Coastal News | Incidents | Don't Miss |

ಮುಂಡಗೋಡ  : ಅನಧಿಕೃತವಾಗಿ ಕಲ್ಲಕೊರೆ ವ್ಯವಹಾರದಲ್ಲಿ ನಿರತರಾಗಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ನಾಗನೂರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಹನಮಾಪುರದ ಹನ್ಮಣ ದುರ್ಗಪ್ಪ ಗೌಡಗೇರಿ, ದೇವಂದ್ರ ಹನ್ಮಣ್ಣ ಗೌಡಗೇರಿ, ಗಣೇಶಪ್ಪ ಚಂದ್ರಪ್ಪ ಕಮ್ಮಾರ ರಾಮಾಪುರದ ಬಸವರಾಜ ರಾಮಣ್ಣ ವಡ್ಡರ. ಶಿಗ್ಗಾಂವ ತಾಲೂಕ ರಾಜುನಗರದ ಚಮನಸಾಬ ಹುಸೇನಸಾಬ ರಾಮಾಪುರ (ಟ್ರ್ಯಾಕ್ಟರ ಚಾಲಕ) ಬಂದಿತ ಆರೋಪಿಗಳು ದುರ್ಗಪ್ಪ ಹನ್ಮಣ್ಣ ಗೌಡಗೇರಿ ಓಡಿ ಹೋಗಿರುವ ಆರೋಪಿಯಾಗಿದ್ದಾನೆ
ಆರೋಪಿಗಳು ಸಂಬಂದ ಪಟ್ಟ ಇಲಾಖೆಯಿಂದ ಅಧಿಕೃತ ಪರವಾನಿಗೆ ಪಡೆಯದೇ ತಾಲೂಕಿನ ನಾಗನೂರ ಗ್ರಾಮದ ನಾಗಮ್ಮ ಸೋಮಣ್ಣ ವಡ್ಡರ ಎಂಬುವರ ಜಮೀನನಲ್ಲಿ ಅನಧಿಕೃತವಾಗಿ ಕಲ್ಲುಕೊರೆಯನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದ್ದು. ಸರಕಾರಕ್ಕೆ ಯಾವುದೇ ರಾಜಧನ ಅಥವಾ ಕರ ಭರಣ ಮಾಡದೇ ಮೋಸ ಮಾಡಿ ಕೃತ್ಯ ನಡೆಸುತ್ತಿದ್ದ ಎಂಬ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸ ಇನ್ಸಪೇಕ್ಟರ ಕಿರಣಕುಮಾರ ನಾಯಕ ಹಾಗೂ ಪಿ‌ಎಸ್‌ಆಯ್ ಲಕ್ಕಪ್ಪ ನಾಯಕ ನೇತೃತ್ವದಲ್ಲಿ ದಾಳಿನಡೆಸಿದ ಪೊಲೀಸರು ೬ ಜನ ಆರೋಪಿಗಳಲ್ಲಿ ೫ ಆರೋಪಿಗಳನ್ನು ಬಂದಿಸಿದ್ದಾರೆ
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ೪ ಲಕ್ಷ ರುಪಾಯಿಕ್ಕಿಂತ ಅಧಿಕ ಮೌಲ್ಯದ ಟ್ರ್ಯಾಕ್ಟರ ಸಹಿತ ಕಾಂಪ್ರೆಸ್, ಸ್ಪ್ಲೆಂಡರ ಮೊಟಾರ, ಕಬ್ಬಿಣದ ಹಾರೆಗಳು ವಶಪಡಿಸಿಕೊಂಡು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...