ಮುಂಡಗೋಡ: ತಾಲೂಕಿನ ನಂದಿಪುರ ಗ್ರಾಮದ ರೈತನೊಬ್ಬ ಶನಿವಾರ ಸಂಜೆ ಸಾಲಬಾಧೆ ತಾಳಲಾರದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹನುಮಂತ ರಾಮಣ್ಣ ವಡ್ಡರ(38) ಮೃತಪಟ್ಟ ರೈತ. ತಂದೆ ಹೆಸರಿನಲ್ಲಿದ್ದ ಜಮೀನಿನಲ್ಲಿ ಈ ಬಾರಿ ಗೋವಿನ ಜೋಳದ ಬೆಳೆಯನ್ನು ಬೆಳೆಯಲು ಖಾಸಗಿ ಸಾಲವನ್ನು ಮತ್ತು ಮನೆಯ ಖರ್ಚಿಗಾಗಿ ಕೈ ಸಾಲವನ್ನು ಮಾಡಿದ್ದನು ಎನ್ನಲಾಗಿದ್ದು ಗೋವಿನ ಜೋಳದ ಬೆಳೆಯ ಇಳುವರಿ ಕಡಿಮೆಯಾಗಿದ್ದರಿಂದ ಸಾಲವನ್ನು ತೀರಿಸಲಾಗದೇ ಮನನೊಂದು ತನ್ನ ಮನೆಯಲ್ಲಿನ ಕೋಣೆಯ ಮೇಲ್ಚಾವಣಿಗೆ ಹಗ್ಗದಿಂದ ಬಿಗಿದುಕೊಂಡು ನೇಣು ಹಾಕಿಕೊಂಡಿದ್ದಾನೆಂದು ಮೃತನ ತಂದೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.