ನೋಟು ಅಮಾನ್ಯೀಕರಣದ ವಿಷಯಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪಕ್ಕೆ ರಾಷ್ಟ್ರಪತಿಗಳಿಗೆ ಮನವಿ

Source: sonews | By Staff Correspondent | Published on 8th November 2017, 7:39 PM | Coastal News |

ಮುಂಡಗೋಡ : ದೇಶದಲ್ಲಿ ಅಸಮಂಜಸವಾಗಿ ಜಾರಿಗೊಳಿಸಲಾದ ವಿನಾಶಕಾರಿ ನೋಟು ಅಮಾನ್ಯೀಕರಣಗೊಂಡು ಒಂದು ವರ್ಷ ಆಗಿದೆ. ನೋಟು ಅಮಾನ್ಯೀಕರಣದ ವಿಷಯಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಬೇಕೆಂದು ರಾಷ್ಟ್ರಪತಿಗಳಿಗೆ ಮುಂಡಗೋಡ ತಾಲೂಕಾ ಕಾಂಗ್ರೆಸ ಕಾರ್ಯಕರ್ತರು ಮುಂಡಗೋಡ ತಹಶೀಲದಾರರ ಮೂಲಕ ಬುಧವಾರ ಮನವಿ ಅರ್ಪಿಸಿದರು.
 2016 ನವೆಂಬರ್ 8ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಎಂದು 500ರೂ. ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ಅಧಿಕೃತವಾಗಿ ರದ್ದುಗೊಳಿಸಿದರು. ಈ ಘೋಷಣೆಯಿಂದಾಗಿ ಬಹುತೇಕ ನಗದು ರೂಪದಲ್ಲಿ ವ್ಯವಹಾರ ನಡೆಸುತ್ತಿದ್ದ ಭಾರತದಂತಹ ದೇಶದಲ್ಲಿ ಶೇ.86ರಷ್ಟು ನೋಟುಗಳು ಅಮಾನ್ಯೀಕರಣಗೊಂಡವು. ಇದರಿಂದಾಗಿ ದೇಶದ ತುಂಬೆಲ್ಲಾ ಭೀಕರ ಅವ್ಯವಸ್ಥೆ ಮತ್ತು ಅರಾಜಕತೆಗಳು ಉಂಟಾಗಿದ್ದು ಅದರ ದುಷ್ಪರಿಣಾಮಗಳನ್ನು ಇಂದೂ ಸಹ ಜನರು ಎದುರಿಸುತ್ತಿದ್ದಾರೆ. ದೇಶದ ಜನರಿಗೆ ಮತ್ತು ದೇಶದ ಆರ್ಥಿಕತೆಗೆ ತೀವ್ರ ತೊಂದರೆ ಉಂಟು ಮಾಡಿದ ಅಪಾಯಕಾರಿ ನೋಟು ಅಮಾನ್ಯೀಕರಣ ಪ್ರಯೋಗದ ಕುರಿತಂತೆ ನಮಗೆ ಸರಕಾರದಿಂದ ನಿರುಪಯೋಗಿ ಸ್ಪಷ್ಟನೆಗಳು ಬೇಕಾಗಿಲ್ಲ. ಈ ಪ್ರಕ್ರಿಯೆಯ ವೇಳೆ ಉಂಟಾದ ಸಾವು ನೋವುಗಳು ನಿಜಕ್ಕೂ ಖೇದಕರವಾಗಿದೆ. ಈ ವಿವೇಚನಾರಹಿತವಾದ ನೋಟ್ ಬ್ಯಾನ್‍ನಿಂದ ಉಂಟಾದ ದುಷ್ಪರಿಣಾಮಗಳನ್ನು ಸಾವು ನೋವುಗಳನ್ನು ಗುರುತಿಸಿ ಅದಕ್ಕೆ ನೊಂದ ಕುಟುಂಬಗಳಿಗೆ ಪರಿಹಾರ ಕೊಡಿಸಬೇಕು. ಈ ಬಗ್ಗೆ ನೀವು ವಹಿಸುವ ಹಸ್ತಕ್ಷೇಪವು ನಿಮ್ಮನ್ನು ಜನರೆಲ್ಲಾ ಭಾರತದ ಹೆಮ್ಮೆಯ ರಾಷ್ಟ್ರಪತಿ ಎಂದು ನೆನಪಿಡುವಂತೆ ಮಾಡುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.  
 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...