ಮುಂಡಗೋಡ : ಬೈಕ್ ಟ್ರ್ಯಾಕ್ಟರ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಹುಬ್ಬಳ್ಳಿ ಶಿರಸಿ ರಸ್ತೆ ಗಣೇಶಪೂರ ಗ್ರಾಮದ ಬಸ್ ನಿಲುಗಡೆ ತಾಣದ ಹತ್ತಿರ ಬುಧವಾರ ಸಂಜೆ ಸಂಭವಸಿದೆ.
ಗಾಯಗೊಂಡ ಬೈಕ್ ಸವಾರರನ್ನು ತಾಲೂಕಿನ ಅಟ್ಟಣಗಿ ಗ್ರಾಮದ ಹನಮಂತ ಬುಗಳಿಕಟ್ಟಿ, ಸುರೇಶ ವಡ್ಡರ ಎಂದು ಗುರುತಿಸಲಾಗಿದೆ.
ಪಟ್ಟಣದ ಹೊಂಡಾ ಶೋರೂಂನಲ್ಲಿ ಬೈಕನ್ನು ಸರ್ವಿಸ್ ಮಾಡಿಸಿಕೊಂಡು ಮುಂಡಗೋಡ ಕಡೆಯಿಂದ ತಮ್ಮೂರಿಗೆ ಹೊರಟಿದ್ದರು ಎನ್ನಲಾಗಿದ್ದು ದಾರಿಯ ಮಧ್ಯ ಬರುವ ಗಣೇಶಪೂರ ಗ್ರಾಮದ ಹತ್ತಿರ ಇವರ ಬೈಕಿಗೆ ಟ್ಯಾಕ್ಟರ ಡಿಕ್ಕಿ ಹೊಡದಿದೆ ಎನ್ನಲಾಗಿದೆ. ಇದರ ಪರಿಣಾಮ ಬೈಕ ಸವಾರರಿಗೆ ತಲೆಗೆ, ಮತು ಮೊಣಕಾಲಿಗೆ, ಗಂಭೀರ ಗಾಯಾವಾಗಿದೆ ಗಾಯಾಳುರನ್ನು ತಾಲೂಕಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಪೊಲೀರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ