ಮುಂಡಗೋಡ : ಭೃಷ್ಟ ಜನವಿರೋಧಿ ಕಾಂಗ್ರೆಸ್ ಸರಕಾರ ವಜಾಮಾಡಿ :ಬಿಜೆಪಿ 

Source: S O News service | By Staff Correspondent | Published on 20th February 2017, 7:33 PM | Coastal News | Don't Miss |

ಮುಂಡಗೋಡ : ಭೃಷ್ಟ ಜನವಿರೋಧಿ ಕಾಂಗ್ರೆಸ್ ಸರಕಾರ ವಜಾಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ತಾಲೂಕ ಘಟಕ ಸೋಮವಾರ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿತು.
ಆಕ್ರಮ ಆಸ್ತಿಪಾಸ್ತಿ ಮಾಡುವ ಕಾಂಗ್ರೆಸ್ ನ ಧುರಿಣರಿಗೆ ಸರಕಾರವು ಅವರ ಮೇಲೆ ಕ್ರಮ ತೆಗೆದುಕೊಳ್ಳದೆ ಅವರ ರಕ್ಷಣೆಗೆ ನಿಂತಿದೆ ಐ.ಟಿ ದಾಳಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ  ಮನೆಯಲ್ಲಿ  ಸಾಕಷ್ಟು ಆಕ್ರಮ ಆಸ್ತಿ ಪತ್ತೆಯಾಗಿದೆ ಆದರೆ ಸರಕಾರ ಕ್ರಮ ತೆಗೆದುಕೊಳ್ಳುವ ಬದಲು ನಿಷ್ಕ್ರೀ ಯಾಗಿದೆ ಜನರ ಅಭಿವೃದ್ದಿಗೆ ವಿನಿಯೋಗಿಸಬೇಕಾದ ಹಣವನ್ನು ಮುಖ್ಯಮಂತ್ರಿಗಳು ತಮ್ಮ ಆಪ್ತ ಶಾಸಕ ಗೋವಿಂದರಾಜ ಮುಖಾಂತರ ೧೦೦೦ ಕೋಟಿಯನ್ನು ಮೂಲಕ ಕಾಂಗ್ರೇಸ್ ಹೈಕಮಾಂಡಿಗೆ ನೀಡಿರುವುದು ಡೈರಿಯಲ್ಲಿ ಉಲ್ಲೇಖವಾಗಿದೆ.
 ರಾಜ್ಯದಲ್ಲಿ ಜಾರಿಗೆ ತಂದಿರುವ ಬಡಜನರ ಅಂತಿಮ ಸಂಸ್ಕಾರಕ್ಕಾಗಿ ನೀಡುವ ರೂ ೫೦೦೦/-ಗಳ ಯೋಜನೆಯಿಂದ ಹಿಡಿದು ಎಲ್ಲಾ ಯೋಜನೆಗಳು ಹಳ್ಳಾ ಹಿಡಿದಿವೆ. ಮರಳು ಮಾಫಿಯಾ ನಡೆಸುತ್ತಿರುವ ಸರಕಾರ ರಾಜ್ಯದಲ್ಲಿ ಮರಳು ಕೃತಕ ಅಭಾವವನ್ನು ಸೃಷ್ಟಿಸಿ ಬಡವರು ಮನೆಕಟ್ಟಿಕೊಳ್ಳಲು ಅಸಾಧ್ಯವಾಗಿದೆ. ಸರಕಾರದ ಯಾವುದೇ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಲು ಸಾದ್ಯವಾಗುತ್ತಿಲ್ಲ.
ರಾಜ್ಯದಲ್ಲಿ ಬರಪೀಡಿತ ತಾಲೂಕುಗಳು ಘೋಷಣೆಯಾಗಿದ್ದು ಯಾವುದೇ ವಿಷೇಶ ಅನುದಾನ ಹರಿದು ಬರುತ್ತಿಲ್ಲ. ಬಡ ಜನರಿಗೆ ಕೂಲಿ ಕೆಲಸವಿಲ್ಲದೆ ಗುಳೆ ಹೊರಟಿದ್ದಾರೆ. ರಾಜ್ಯದಲ್ಲಿ ತೆರೆದಿರುವ ಬೆರಳೆಣೆಕೆ ಗೋ ಶಾಲೆಗಳಲ್ಲಿ ಸರಿಯಾಗಿ ನಿರ್ವಹಣೆ ಇಲ್ಲದಿರುವುದರಿಂದ ಗೋವುಗಳು ಸಾಯುತ್ತಾ ಸಾಗಿವೆ. ದಲಿತರ ಅಭಿವೃದ್ಧಿಗೆ ಬಜೆಟ್‌ನಲ್ಲಿ ನಿಗದಿ ಪಡಿಸಿರುವ ವಿಶೇಷ ಘಟಕ ಯೋಜನೆ ಮೊತ್ತ ಸಂಪೂರ್ಣವಾಗಿ ಖರ್ಚುಮಾಡದೆ, ದಲಿತರಿಗೆ ಮುಖ್ಯವಾಹಿನಿಗೆ ಬರಲು ಅಡ್ಡಿಪಡಿಸಿದ್ದಾರೆ. ಕೆರೆ ಕಟ್ಟಿಗಳನ್ನು ಹೂಳೆತ್ತಿ ನೀರು ತುಂಬಿಸುವ ಕೆಲಸ ಮಾಡದಿದ್ದರಿಂದ ಈಗ ರಾಜ್ಯದಲ್ಲಿ ಜಲಕ್ಷಾಮವನ್ನು ಜನರು ಎದುರಿಸಬೇಕಾಗಿದೆ. ಕಾಂಗ್ರೇಸ ಸರ್ಕಾರಕ್ಕೆ ಯಾವುದೇ ಮುಂದಾಲೋಚನೆ ಇಲ್ಲ. ರಾಜ್ಯದ ಜನ ದನಕರುಗಳು ನೀರು ಆಹಾರವಿಲ್ಲದೆ ನಲುಗಿಹೊಗಿದ್ದಾರೆ. ಇಂತಹ ಭೃಷ್ಟ ಜನವಿರೋಧಿ ಕಾಂಗ್ರೇಸ್ ಸರ್ಕಾರವನ್ನು ವಜಾ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ತಾಲೂಕಾ ಅಧ್ಯಕ್ಷ ಗುಡ್ಡಪ್ಪಾ ಕಾತೂರ, ಮಾಜಿ ಶಾಸಕ ವಿ.ಎಸ್.ಪಾಟೀಲ, ಮಾಜಿ ಪ.ಪಂ ಅಧ್ಯಕ್ಷ ಫಣಿರಾಜ ಹದಳಗಿ, ಅಶೋಕ ಚಲವಾದಿ,ನಿಕಟಪೂರ್ವ ಅಧ್ಯಕ್ಷ ನಾಗಭೂಷಣ ಹಾವಣಗಿ, ಉಮೇಶ ಬೀಜಾಪುರ, ತುಕಾರಾಮ ಇಂಗಳೆ. ಬಸವರಾಜ ಓಶಿಮಠ, ರಾಜು (ವಡಗಟ್ಟಾ) ಉಮೇಶ ಗಾಣಗೇರ ತಂಚ್ಚನ್ನ ಸೇರಿದಂತೆ ಮುಂತಾದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...