ಮುಂಡಗೋಡ : ತಾಲೂಕಿನ ಕಾತೂರ ಗ್ರಾ.ಪಂ ವ್ಯಾಪ್ತಿಯ ಮರಗಡಿ ಗ್ರಾಮದ ಕಾಡಿನಲ್ಲಿ ಬುಧವಾರ ಸಂಜೆ ದನಗಾಹಿ ಮೇಲೆ ಕರಡಿವೊಂದು ದಾಳಿ ಮಾಡಿ ಗಾಯಪಡಿಸಿದೆ.
ಕರಡಿಯಿಂದ ಗಾಯಗೊಂಡವನನ್ನು ಮರಗಡಿ ಗ್ರಾಮದ ಗೌಳಿದಡ್ಡ್ಡಿ ನಿವಾಸಿ ನಿನ್ನು ಬಾಬು ಪೊರಡೆ(೩೦), ಎಂದು ತಿಳಿದುಬಂದಿದೆ. ಈತನು ಪ್ರತಿದಿನದಂತೆ ಬುಧವಾರವು ದನಕಾಯಲು ಕಾಡಿಗೆ ಹೊಗಿದ್ದಾನೆ ಸಂಜೆ ವೇಳೆ ಕರಡಿ ಏಕಾಏಕಿ ದಾಳಿ ನಡೆಸಿದೆ. ಅದೃಷ್ಟವಶಾತ್ ಆತ ತಪ್ಪಿಸಿಕೊಂಡು ಬಂದಿದ್ದಾ. ಕರಡಿ ದಾಳಿಗೆ ಕೈ, ಹೊಟ್ಟೆಭಾಗಕ್ಕೆ ಉಗರಿನಿಂದ ಗಾಯಪಡಿಸಿದೆ. ಗಾಯಗೊಂಡ ನಿನ್ನು ಪೊರಡೆ, ಮುಂಡಗೋಡಿನ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ತಾಲೂಕಾ ಆಸ್ಪತ್ರೆಗೆ ಉಪವಲಯ ಅರಣ್ಯಾಧಿಕಾರಿ ಮಹೇಶ .ಕೆ. ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ