ಮುಂಡಗೋಡ: ಬಾಣಂತಿ ದೇವಿ (ಸಾಲಗಾಂವ) ಜಾತ್ರೆ 2-3 ದಿನ ನಡೆಯುವ ಜಾತ್ರೆಯು ಭಾನುವಾರ ಅತಿ ವಿಜ್ರಂಭಣೆಯಿಂದ ನಡೆಯಿತು. ಪ್ರತಿವರ್ಷ ( ಜನವರಿ 14ರಿಂದ 16 ವರೆಗೆ) ಮಕರ ಸಂಕ್ರಮಣದಂದು ಸಾಲಗಾಂವ ಗ್ರಾಮದ ಹುಬ್ಬಳ್ಳಿ ಶಿರಸಿ ರಸ್ತೆಯ ಕೆರೆ ಒಡ್ಡಿನ ಮೇಲೆ ವಿರಾಜಮಾನವಾಗಿರುವ ಬಾಣಂತಿ ದೇವಿ (ಸಾಲಗಾಂವ). ಜಾತ್ರೆ ನಡೆಯುತ್ತಿದೆ. 15ನೇ ತಾರೀಖಿಗೆ ನಡೆಯುವ ಜಾತ್ರೆಗೆ ಸೋಭಗು ಬೇರೆಯೇ ಇರುತ್ತದೆ ತಾಲೂಕಿನ ಜನ ಸೇರಿದಂತೆ ಅಕ್ಕಪಕ್ಕದ ತಾಲೂಕಿನ ಹಾಗೂ ಜಿಲ್ಲೆಯ ಜನರು ಸೇರಿರುತ್ತಾರೆ
ಸಾಲಗಾಂವ ಕೆರೆಯ ಮೇಲಿರುವ ಬಾಣಂತಿದೇವಿ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ 5 ಗಂಟೆಗೆ ಪ್ರಥಮ ಪೂಜೆ ಮತ್ತು ಮಹಾಭಿಷೇಕ, 6 ಗಂಟೆಗೆ ಪ್ರಣಮ ಪಂಚಾಕ್ಷರಿ ಮಂತ್ರ ಘೋಷದೊಂದಿಗೆ ಸಪ್ತಾಹ ಪ್ರಾರಂಭವಾಗಿ. ಸೋಮವಾರ ಬೆಳಗ್ಗೆ 6.30ಕ್ಕೆ ಪ್ರಣಮ ಪಂಚಾಕ್ಷರಿ ಸಪ್ತಾಹ ಮಂಗಳಗೊಳ್ಳಲಿದೆ. 9 ಗಂಟೆಗೆ ದೇವಿಗೆ ಮಹಾಪೂಜೆ, ಉಡಿತುಂಬುವದು ಹಣ್ಣು ಕಾಯಿ ಸಮರ್ಪಣೆ ನಂತರ ಗ್ರದ ಸರ್ವ ದೇವರಿಗೆ ಹಣ್ಣು ಕಾಯಿ ಸಮರ್ಪಣೆ ಕಾರ್ಯಕ್ರಮ ಡೋಳ್ಳಿನ ಮಜಲು, ಭಜನೆ ನಡೆಯಿತು. ಸಂಜೆ 4ಗಂಟೆಗೆ ಶ್ರೀದೇವಿಯ ಪಲ್ಲಕ್ಕಿ ಉತ್ಸವ ಮತ್ತು ತಪೋತ್ಸವ, ಸಂಜೆ 5ಗಂಟೆಗೆ ಜ್ಯೋತಿ ಪೂಜೆಯೊಂದಿಗೆ ಕೆರೆಯಲ್ಲಿ ದೀಪದ ತೆಪ್ಪ ಬಿಡಲಾಯಿತುಬಿಟ್ಟು ಸಂಜೆ 7ಗಂಟೆಗೆ ಡೊಳ್ಳಿಮಜಲು, ಡೊಳ್ಳಿನ ಪದ ಹಾಗು ಭಜನೆಗಳು ನಡೆದವು.
ತಾಲೂಕಿನಲ್ಲಿ ಪ್ರತಿ ವರ್ಷ ಜರುಗುವ ಜಾತ್ರೆಗಳಲ್ಲಿ ಸಾಲಗಾಂವ ಜಾತ್ರೆ ದೊಡ್ಡ ಜಾತ್ರೆಯಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ತಾಲೂಕಿನ ಸಾಲಗಾಂವ ಗ್ರಾಮದ ಬಾಣಂತಿದೇವಿ ಜಾತ್ರೆ ತನ್ನದೆ ಆದ ವೈಶಿಷ್ಟ್ಯತೆ ಹೊಂದಿದ ಸೋಮವಾರ ನಡೆದ ಜಾತ್ರೆಯಲ್ಲಿ ಸುತ್ತಮುತ್ತಲಿನ ಹಳ್ಳಿ ಹಾಗು ನಗರ ಪ್ರದೇಶದಿಂದ ಅಕ್ಕಪಕ್ಕ ತಾಲೂಕಗಳಿಂದ ಭಕ್ತರು ಜಾತ್ರೆಯಲ್ಲಿ ಪಾಲ್ಗೋಂಡು ದೇವಿಯ ಆಶೀರ್ವಾದ ಪಡೆದು ದೇವಿಗೆ ಕೃತಾರ್ಥರಾದರು
ಬಾಂಣಂತಿ ದೇವಿಯ ಜಾತ್ರೆಯಲ್ಲಿ ಎಲ್ಲ ಜಾತಿ ಧರ್ಮ ವರ್ಗದವರು ಪಾಲ್ಗೊಳ್ಳುತ್ತಾರೆ.
ಮಗವನ್ನು ಕರುಣಿಸು ತಾಯಿ ಎಂದು ಬಾಣಂತಿ ದೇವಿಗೆ ಭಕ್ತಿ ಭಾವದಿಂದ ನಿವೇದಿಸಿಕೊಂಡರೆ ಬಂಜೆ ಎನ್ನುವ ಪದದಿಂದ ಮುಕ್ತಿಗೊಳಿಸುತ್ತಾಳೆ ಎನ್ನುವ ಬಲವಾದ ನಂಬಿಕೆ ಇರುವುದರಿಂದ ವರ್ಷದಿಂದ ವರ್ಷಕ್ಕೆ ಜನಸಾಗರವೇ ಹರಿದು ಬರುತ್ತಿರುವುದು ಎಂದು ಇಲ್ಲಿಯ ಭಕ್ತರ ಮಾತು
ಮಕ್ಕಳಾಗಲಿ ಎಂದು ಹರಕೆ ಹೊತ್ತ ಮಹಿಳೆಯರು ಹರಕೆ ನೆರವೇರಿದಾಗ ಕೆಲವರು ಮಕ್ಕಳನ್ನು ಕೆರೆಯಲ್ಲಿ ಮಿಂದಿಸಿದರೆ ಇನ್ನು ಕೆಲವರು ತೆಪ್ಪದಲ್ಲಿ ತೇಲಿಸಿ ತೆಗೆಯುತ್ತಾರೆ. ಇದು ದೇವರಿಗೆ ಸಮರ್ಪಣೆಯಾಗುತ್ತಿದೆ. ಹರಕೆ ಪೂರ್ಣಗೊಳ್ಳುವುದರಿಂದ ದೇವಿಗೆ ಕೃತಾರ್ಥರಾಗುತ್ತಾರೆ
ಜಾತ್ರೆಯ ಸೊಭಗನ್ನು ಸವಿಯಲು ಬಂಧು ಬಳಗ ಸ್ನೇಹಿತರನ್ನು ಇಲ್ಲಿಯ ಜನರು ಅಹ್ವಾನಿಸುತ್ತಾರೆ. ಅತಿಥಿಗಳು ಒಂದೇರಡು ದಿನ ಜಾತ್ರೆ ಮಜಾ ಸವಿದು ಹೋಗುವುದು ಇಲ್ಲಿ ಕಾಣಬಹುದಾಗಿದೆ
ಪಟ್ಟಣದವರು ಜಾತ್ರೆದಿನದೊಂದು ಮಧ್ಯಾಹ್ನ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದಮಾಡಿ ಜಾತ್ರೆಯಲ್ಲಿ ಪಾಲ್ಗೊಳುತ್ತಾರೆ. ಆ ದಿನ ದ್ವಿಚಕ್ರ ವಾಹನಗಳ ಹಾಗು ಗ್ರಾಮಾಂತರದಿಂದ ಬರುವ ಚಕ್ಕಡಿ ಟ್ರ್ಯಾಕ್ಟರ ಭರಾಟೆ ನೋಡುವದೇ ಒಂದು ಸೊಭಗು.
ತಾಲೂಕಿನ ಜನತೆಗೆ ಮುದನೀಡುವ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಯುವುದು ಅಪರೂಪ ಇರುವುದರಿಂದ ಸಾರ್ವಜನಿಕರು ಹೊಸವರ್ಷದಿಂದ ಪ್ರಾರಂಭವಾಗುವ ಸಾಲಗಾಂವ ಜಾತ್ರೆಯಲ್ಲಿ ಪರಿವಾರ ಸಮೇತ ಪಾಲ್ಗೊಂಡು ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ ಎನ್ನುವುದು ಸತ್ಯ.
Read These Next
ಕಾರವಾರ: ಜಿಲ್ಲೆಯಲ್ಲಿ ಬುಧವಾರ 7 ನಾಮಪತ್ರ ಸಲ್ಲಿಕೆ
12 ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, ನಾಮಪತ್ರಗಳ ಸಲ್ಲಿಕೆಗೆ ಮೂರನೇ ದಿನವಾದ ಬುಧವಾರ ಜಿಲ್ಲೆಯಲ್ಲಿ ...
ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ
ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...
ದುಬೈಯಲ್ಲಿ ಮಹಾಮಳೆ; 18ಕ್ಕೂ ಹೆಚ್ಚು ಮಂದಿ ಸಾವು; ಜಲಾವೃತ್ತಗೊಂಡ ವಿಮಾಣ ನಿಲ್ದಾಣ
ದುಬೈ: ಸಾಮಾನ್ಯವಾಗಿ ವರ್ಷದ ಈ ಸಮಯದಲ್ಲಿ ಬಿಸಿಲ ಬೇಗೆಯಿರುತ್ತಿದ್ದ ಸಂಯುಕ್ತ ಅರಬ್ ಸಂಸ್ಥಾನವು ಮಂಗಳವಾರ ಸುರಿದ ಭಾರೀ ಮಳೆಗೆ ...
ಉರಿ ಬಿಸಿಲಲ್ಲೂ ಭರ್ಜರಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ ಡಾ.ಅಂಜಲಿ ನಿಂಬಾಳ್ಕರ್
ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರು ಕಾಂಗ್ರೆಸ್ ಪಕ್ಷದ ಹಿರಿಯರು, ...
ಗ್ಯಾರಂಟಿ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಹಿಂದೆ ಬಿದ್ದಿದ್ದಾರೆ: ಆರ್ ವಿ ದೇಶಪಾಂಡೆ
ಕಾರವಾರ: ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ. ಮೋದಿ ಗ್ಯಾರಂಟಿ ಎಂದು ...
ಕಾರವಾರ: ಜಿಲ್ಲೆಯಲ್ಲಿ ಮಂಗಳವಾರ 4 ನಾಮಪತ್ರ ಸಲ್ಲಿಕೆ
12-ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬAಧಿಸಿದAತೆ, ನಾಮಪತ್ರಗಳ ಸಲ್ಲಿಕೆಗೆ ಮೂರನೇ ದಿನವಾದ ಮಂಗಳವಾರ ...
ಕಾರವಾರ: ಜಿಲ್ಲೆಯಲ್ಲಿ ಮಂಗಳವಾರ 4 ನಾಮಪತ್ರ ಸಲ್ಲಿಕೆ
12-ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬAಧಿಸಿದAತೆ, ನಾಮಪತ್ರಗಳ ಸಲ್ಲಿಕೆಗೆ ಮೂರನೇ ದಿನವಾದ ಮಂಗಳವಾರ ...
ನೀರಿನ ಪೈಪ್ ಲೈನ್ ಹಾಳಾಗಿ ಚರಂಡಿ ಸೇರಿದ ಸಾವಿರಾರು ಲೀಟರ್ ಕುಡಿಯುವ ನೀರು
ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕುಡಿಯುವ ನೀರಿನ ಪೈಪ್ನಲ್ಲಿ ...
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಮೂರು ನಾಮಪತ್ರ ಸಲ್ಲಿಕೆ
ಕಾರವಾರ : 12-ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ಜಿಲ್ಲೆಯಲ್ಲಿ ಇಂದು ಒಟ್ಟು ಮೂರು ...
ಕಾರವಾರ ಯುವತಿ ಕಾಣೆ. ಪತ್ತೆಗಾಗಿ ಮನವಿ.
ಸುನೀತಾ ಕಿರಣ ಲಮಾಣಿ(20ವರ್ಷ), ಸಾ: ಲಕ್ಷಮೇಶ್ವರ, ಅಕ್ಕಿಗುಂದಿ, ಗದಗ. ಹಾಲಿ ಸೀಬರ್ಡ್ ಕಾಲೋನಿ, ಚಿತ್ತಾಕುಲ ಕಾರವಾರ ಇವರು ದಿನಾಂಕ:10-04-2024 ...
ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...
ಮಲಗಿದ್ದವರ ಮೇಲೆ ಹರಿದ ಕಾರು : ಮಗು ಸೇರಿ ಇಬ್ಬರು ಗಂಭೀರ
ಮಲಗಿದ್ದವರ ಮೇಲೆ ಹರಿದ ಕಾರು : ಮಗು ಸೇರಿ ಇಬ್ಬರು ಗಂಭೀರ