ಮುಂಡಗೋಡ : ಎಪಿಎಮ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿ ಬಿಜೆಪಿ ಮುಖಭಂಗ ಅನುಭವಿಸಿದೆ
ಮಾ.೧೯ ರಂದು ನಡೆದ ನಡೆದ ಎಪಿಎಮ್ಸಿ ಚುನಾಣೆಗೆ ಇಂದು ಫಲಿತಾಂಶ ಹೊರಬಿದ್ದಿದೆ. ೧೧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ೮ ಹಾಗೂ ಬಿಜೆಪಿ ೩ ಸ್ಥಾನಗಳನ್ನು ಪಡೆದುಕೊಂಡಿದೆ.
ಕಾಂಗ್ರೆಸ್ ಜಯಗಳಿಸಿದ ಕ್ಷೇತಗಳು ವಿಜಯಲಕ್ಷ್ಮೀ ಹೀರೆಮಠ (ಹುನಗುಂದ),ಅಶೋಕ ತಡಸದ (ಇಂದೂರ), ದೇವು ಪಾಟೀಲ(ಮೈನಳಿ),ಬಾಬಣ್ಣ ಲಾಡನವರ (ಚಿಗಳ್ಳಿ), ಬಾಬಣ್ಣ ಕೋಣನಕೇರಿ(ಪಾಳಾ), ಲಿಂಗನಗೌಡ ಪಾಟೀಲ(ಕಾತೂರ),ಕಲ್ಮೇಶಿ ವಾಲ್ಮೀಕಿ (ಸಾಲಗಾಂವ) ಹಾಗೂ ಮಂಜುನಾಥ ವರ್ಣೇಕರ(ಮುಂಡಗೋಡ).
ಬಿಜೆಪಿ ಜಯಗಳಿಸಿದ ಕ್ಷೇತ್ರಗಳು ನಿಂಗಪ್ಪ ಕವಟೆ (ನಂದಿಗಟ್ಟಾ), ಶಿವಪ್ಪ ನಾಯಕ್(ಬೆಡಸ್ಗಾಂವ) ಹಾಗೂ ಸುಧಾ ಪಾಟೀಲ(ಮಳಗಿ)
ಕಾಂಗ್ರೆಸ್ ಎಂಟು ಸ್ಥಾನಗಳನ್ನು ಪಡೆದುಕೊಂಡು ಎಪಿಎಮ್ಸಿ ಅಧಿಕಾರ ಗದ್ದುಗೆ ಏರಲಿದೆ
ಗೆಲುವಿನಿಂದ ಬೀಗಿದ ಕಾಂಗ್ರೆಸ್ ಕಾರ್ಯಕರ್ತರು ಸಿಡಿಮದ್ದು ಸಿಡಿಸಿ ಎಪಿಎಮ್ಸಿ ಚುನಾಯಿತ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ ಹಿರಿಯ ಧುರಿಣರು ಸೇರಿದಂತೆ ಮೇರವಣಿಗೆ ನಡೆಸಿದರು
ಮೇರವಣೆಗೆಯಲ್ಲಿ ಚುನಾಯಿತ ಎಪಿಎಮ್ಸಿ ಸದಸ್ಯರು,ಕಾಂಗ್ರೆಸ್ ಅಧ್ಯಕ್ಷ ರವಿಗೌಡಾ ಪಾಟೀಲ, ಎಲ್.ಟಿ.ಪಾಟೀಲ, ರಫೀಕ ಇನಾಮದಾರ, ಮಹ್ಮದಗೌಸ ಮಕಾನದಾರ, ಕೃಷ್ಣಾ ಹಿರೇಹಳ್ಳಿ, ಪಿ.ಎಸ್.ಸಂಗೂರಮಠ, ಲತೀಫ ನಾಲಬಂದ, ಅಲ್ಲಿಖಾನ ಪಠಾಣ, ರಾಮಕೃಷ್ಣ ಮೂಲಿನಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು