ನಾಯಿ ಬೋಗಳಿದೆ ಎಂದು ವ್ಯಕ್ತಿಮೇಲೆ ಹಲ್ಲೆ ಜೀವಬೆದರಿಕೆ
ಮುಂಡಗೋಡ : ನಾಯಿ ಬೋಗಳಿದ ವಿಷಯಕ್ಕೆ ಸಂಬಂದಿಸಿದಂತೆ ನಾಯಿ ಮಾಲಿಕನ ಮೇಲೆ ಮೂರು ಜನರು ಹೊಡೆಬಡೆ ಮಾಡಿ ಜೀವ ಬೇದರಿಕೆ ಹಾಕಿದ ಘಟನೆ ತಾಲೂಕಿನ ಮಳಗಿ ಗ್ರಾ.ಪಂ ವ್ಯಾಪ್ತಿಯ ಕೊಳಗಿ ಗ್ರಾಮದಲ್ಲಿ ನಡೆದಿದೆ
ನಾಯಿ ಮಾಲಿಕ ಗಣಪತಿಗೌಡ ಪಾಟೀಲ ನಾಯಿಗೆ ಮೂತ್ರವಿಸರ್ಜನೆಗೆ ಹೊರಗಡೆ ಬಿಟ್ಟಾಗ ಆರೋಪಿ ರಾಘವೇಂದ್ರ ಪಾಟೀಲ ಬೈಕ್ ಮೇಲೆ ಹೊರಟಾಗ ನಾಯಿ ಬೆನ್ನುಹತ್ತಿ ಬೋಗಳಿದೆ. ಮಾಲಿಕನು ತನ್ನ ನಾಯಿಯನ್ನು ತನ್ನ ಬಳಿಗೆ ಕರೆದಿದ್ದಾನೆ ಬೈಕ್ ನಿಲ್ಲಿಸಿ ಆರೋಪಿತನು ಕೋಪಿತನಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೋಡೆಬಡೆ ಮಾಡಿದ್ದಾನೆ. ಈ ಘಟನೆ ನಡೆಯುತ್ತಿರುವಾಗ ಆರೋಪಿತ ಪರವಾಗಿ ಮತ್ತೆರಡು ಜನರಾದ ನಾಗರಾಜ ಪಾಟೀಲ ಮತ್ತು ಚನಪ್ಪಗೌಡ ಪಾಟೀಲ ಗಣಪತಿಗೆ ಹೊಡೆದಿದ್ದಾರೆ ಹಾಗೂ ಜಗಳ ಬಿಡಿಸಲು ಬಂದ ಸಂತ್ರಸ್ಥನ ಸಹೋದರ ಚಂದ್ರಗೌಡ ಪಾಟೀಲಗೂ ಹೊಡೆಬಡೆ ಮಾಡಿದ್ದಾರೆ.
ಈ ಕುರಿತು ಸಂತ್ರಸ್ಥ ಗಣಪತಿಗೌಡ ಪಾಟೀಲ ಗುರುವಾರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ