ನಾಯಿ ಬೋಗಳಿದೆ ಎಂದು ವ್ಯಕ್ತಿಮೇಲೆ ಹಲ್ಲೆ ಜೀವಬೆದರಿಕೆ

Source: sonews | By Staff Correspondent | Published on 4th January 2019, 11:25 PM | Coastal News | Don't Miss |

ಮುಂಡಗೋಡ : ನಾಯಿ ಬೋಗಳಿದ ವಿಷಯಕ್ಕೆ ಸಂಬಂದಿಸಿದಂತೆ ನಾಯಿ ಮಾಲಿಕನ ಮೇಲೆ ಮೂರು ಜನರು ಹೊಡೆಬಡೆ ಮಾಡಿ ಜೀವ ಬೇದರಿಕೆ ಹಾಕಿದ ಘಟನೆ ತಾಲೂಕಿನ ಮಳಗಿ ಗ್ರಾ.ಪಂ ವ್ಯಾಪ್ತಿಯ ಕೊಳಗಿ ಗ್ರಾಮದಲ್ಲಿ ನಡೆದಿದೆ

ನಾಯಿ ಮಾಲಿಕ ಗಣಪತಿಗೌಡ ಪಾಟೀಲ ನಾಯಿಗೆ ಮೂತ್ರವಿಸರ್ಜನೆಗೆ ಹೊರಗಡೆ ಬಿಟ್ಟಾಗ ಆರೋಪಿ ರಾಘವೇಂದ್ರ ಪಾಟೀಲ ಬೈಕ್ ಮೇಲೆ ಹೊರಟಾಗ ನಾಯಿ ಬೆನ್ನುಹತ್ತಿ ಬೋಗಳಿದೆ. ಮಾಲಿಕನು ತನ್ನ ನಾಯಿಯನ್ನು ತನ್ನ ಬಳಿಗೆ ಕರೆದಿದ್ದಾನೆ ಬೈಕ್ ನಿಲ್ಲಿಸಿ ಆರೋಪಿತನು ಕೋಪಿತನಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೋಡೆಬಡೆ ಮಾಡಿದ್ದಾನೆ. ಈ ಘಟನೆ ನಡೆಯುತ್ತಿರುವಾಗ ಆರೋಪಿತ ಪರವಾಗಿ ಮತ್ತೆರಡು ಜನರಾದ ನಾಗರಾಜ ಪಾಟೀಲ ಮತ್ತು ಚನಪ್ಪಗೌಡ ಪಾಟೀಲ  ಗಣಪತಿಗೆ ಹೊಡೆದಿದ್ದಾರೆ ಹಾಗೂ ಜಗಳ ಬಿಡಿಸಲು ಬಂದ ಸಂತ್ರಸ್ಥನ ಸಹೋದರ ಚಂದ್ರಗೌಡ ಪಾಟೀಲಗೂ ಹೊಡೆಬಡೆ ಮಾಡಿದ್ದಾರೆ.

ಈ ಕುರಿತು ಸಂತ್ರಸ್ಥ  ಗಣಪತಿಗೌಡ ಪಾಟೀಲ ಗುರುವಾರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...