ಅಕಸ್ಮಾತ್ ಗುಂಡು ತಾಗಿ ಬಾಲಕನಿಗೆ ಗಾಯ

Source: S O News service | By Staff Correspondent | Published on 26th September 2016, 11:30 PM | Coastal News | Don't Miss |


ಮುಂಡಗೋಡ: ತಾಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ಅಕಸ್ಮಾತ್ ಆಗಿ ಏರ್‌ಗನ್ ಗುಂಡು ತಗುಲಿ ಪುಟ್ಟ ಬಾಲಕನೋರ್ವ ಗಾಯಗೊಂಡ ಘಟನೆ ಜರುಗಿದೆ.
೧ ವರ್ಷ ೧೦ ತಿಂಗಳು ವಯಸ್ಸಿನ ದೀಪಕ ಹನುಮಂತಪ್ಪ ಕುಂಬಾರ ಎಂಬಾತನೇ ಗಾಯಗೊಂಡ ಬಾಲಕ. ಈತ ಶುಕ್ರವರ ಸಂಜೆ ೬.೩೦ರ ಸುಮಾರಿಗೆ ಮನೆಯ ಹತ್ತಿರ ತಿರುಗಾಡಿಕೊಂಡಿದ್ದ. ಈತ ಚಡ್ಡಿ ಧರಿಸದೇ ತಿರುಗುತ್ತಿದ್ದುದನ್ನು ಗಮನಿಸಿದ ಈತನ ಸಂಬಂಧಿ ಬಸವಣ್ಣೆಪ್ಪ ಉಳವಪ್ಪ ಚಕ್ರಸಾಲಿ ಎಂಬಾತ ಯಾಕೆ ಚಡ್ಡಿ ಹಾಕಿಲ್ಲ ಎಂದು ಸುಮ್ಮನೇ ಬೆದರಿಸಲು ತನ್ನ ಬಳಿ ಇದ್ದ ಏರ್‌ಗನ್ ತೋರಿಸಿದ್ದಾನೆ. ಅಚಾತುರ್ಯದಿಂದ ಗುಂಡು ಫೈರ್ ಆಗಿದ್ದು, ಎದುರಿಗಿದ್ದ ಬಾಲಕನ ಹೊಟ್ಟೆಗೆ ಗುಂಡು ತಾಗಿದೆ. ಗಾಯಗೊಂಡ ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಈ ಸಂಬಂಧ ಬಾಲಕನ ತಂದೆ ಹನುಮಂತಪ್ಪ ಚೆನ್ನಪ್ಪ ಕುಂಬಾರ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...