ಆತ್ಮಾ ಯೋಜನೆಯಡಿ ರೈತರ ಕ್ಷೇತ್ರದಲ್ಲಿ ಪ್ರಾತ್ಯಕ್ಷತೆಯ ಕ್ಷೇತ್ರೋತ್ಸವ

Source: sonews | By Staff Correspondent | Published on 19th November 2017, 7:13 PM | Coastal News | Don't Miss |

ಮುಂಡಗೋಡ : 2017-18 ನೇ ಸಾಲಿನ ಆತ್ಮಾ ಯೋಜನೆಯಡಿ ರೈತ ಕ್ಷೇತ್ರ ಪಾಠಶಾಲೆಯನ್ನು ತಾಲೂಕಿನ ಕೋಳಗಿ ಗ್ರಾಮದಲ್ಲಿ ಕೈಗೊಳ್ಳಲಾಗಿತ್ತು ಇದರ ಅಂಗವಾಗಿ ಹರಗನಹಳ್ಳಿಗ್ರಾಮದಲ್ಲಿ  ಗಜಾನನ ಕತ್ಲೇರ್, ಪ್ರಗತಿಪರ ರೈತರ ಕ್ಷೇತ್ರದಲ್ಲಿ ಪ್ರಾತ್ಯಕ್ಷತೆಯ ಕ್ಷೇತ್ರೋತ್ಸವ ಜರುಗಿಸಲಾಯಿತು.
ಕ್ಷೇತ್ರದಲ್ಲಿ ಗಂಗೋತ್ರಿ ಮತ್ತು ಅಭಿಲಾಷಾ ಭತ್ತದ ತಳಿಗಳ ಕುರಿತು ನಾಟಿ ಹಾಗೂ ಕೂರಿಗೆ ಬಿತ್ತನೆಗಳ ಬಗ್ಗೆ ತಾಂತ್ರಿಕ ಅವಿಷ್ಕಾರಗಳ ಅಳವಡಿಕೆ ಕುರಿತು ಭಾಗವಹಿಸಿದ ಸುಮಾರು 70 ರೈತರಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮೂಲಕ ತಾಂತ್ರಿಕ ಮಾಹಿತಿಯನ್ನು ನೀಡಲಾಯಿತು. ಕ್ಷೇತ್ರೋತ್ಸವದ  ದಾನಿ ರೈತ ಗಜಾನನ ಅತ್ಲೇರ  ಮಾತನಾಡಿ ಈ ತಳಿಗಳ ಬಗ್ಗೆ ತಮ್ಮ ಅನುಭವ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಧುಕರ ಸೇಟ್, ಆರ್.ಜಿ.ನಾಯ್ಕ, ಮೈಲಾರಪ್ಪ ಬಾವಿಮ ನಾಗರಾಜಗೌಡ ಪಾಟೀಲ ಚಂದ್ರಗೌಡ ಪಾಟೀಲ್ ಹುಲಮನಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...