ಮುಂಡಗೋಡ : ಬೈಕ್ಗಳ ಮಧ್ಯ ಡಿಕ್ಕಿ ಸಂಭವಿಸಿ ಬೈಕ್ ಸವಾರನೋರ್ವ ಸ್ಥಳದಲ್ಲಿ ಮೃತಪಟ್ಟು ಎರಡು ಸವಾರರು ಗಾಯಗೊಂಡ ಘಟನೆ ಮುಂಡಗೋಡ-ಕಲಘಟಗಿ ರಸ್ತೆಯ ಕೊಪ್ಪ ಗ್ರಾಮದ ಹೊರ ವಲಯದ ಕೆರೆ ಹತ್ತಿರ ಮಂಗಳವಾರ ಸಂಭವಿಸಿದೆ
ಮೃತಪಟ್ಟ ಬೈಕ್ ಸವಾರನನ್ನು ಟಿಬೇಟ್ ಕ್ಯಾಂಪ್ ನಂ ೬ ರ ನಿವಾಸಿ ಅರ್ಜನ್ದೊರ್ಜೆ (೩೮) ಎಂದು ತಿಳಿದು ಬಂದಿದೆ.
ಬೈಕ್ ಹಿಂದೆ ಕುಳಿತ ಗಂಭೀರವಾಗಿ ಗಾಯಗೊಂಡವನನ್ನು ಕೊಪ್ಪ ಗ್ರಾಮದ ಮೌಲಾಸಾಬ ಮಹಬೂಬಸಾಬ ಉಸ್ತಾದಿ(೩೬), ಬೈಕ್ ಅಪಘಾತ ಪಡಿಸಿದವನನ್ನು ಕೊಪ್ಪಗ್ರಾಮದ ರಾಜೇಸಾಬ ಹೈದರಲಿ ನಿರಲಗಿ(೨೭) ಎಂದು ಹೇಳಲಾಗಿದೆ.
ರಾಜೇಸಾಬ ನಿರಲಗಿ ಬೈಕ್ ಹಿಂದೆ ರಾಜೇಸಾಬ ಉಸ್ತಾದಿಯನ್ನು ಕೂರಿಸಿಕೊಂಡು ಬೈಕ್ ಚಲಾಯಿಸುತ್ತಾ ಮುಂಡಗೋಡದಿಂದ ಕಲಘಟಗಿ ದಿಕ್ಕಿಗೆ ಹಾಗೂ ಮೃತ ಅರ್ಜನದೊರ್ಜೆ ಮುಂಡಗೋಡ ದಿಕ್ಕಿಗೆ ಬರುತ್ತಿದ್ದಾಗ ಎದುರು ಬದರು ಬೈಕ್ ಗಳ ಡಿಕ್ಕಿ ಸಂಭವಿಸಿದೆ. ದೊರ್ಜೆ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ರಾಜೇಸಾಬ ನಿರಲಗಿ ಬೈಕ್ ಹಿಂದೆ ಕುಳಿತಕೊಂಡ ಸವಾರ ರಾಜೇಸಾಬ ಉಸ್ತಾದಿ ಹಣೆಗೆ ಬಲವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಕುರಿತು ಮುಂಡಗೋಡ ಪಿಎಸೈ ಲಕ್ಕಪ್ಪ ನಾಯಕ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಕೈಗೊಂಡಿದ್ದಾರೆ