ಮುಂಡಗೋಡ: ಬಿಜೆಪಿ ಕಾರ್ಯಕರ್ತನೋರ್ವನ ಜೇಬಿನಿಂದ ಒಂದು ಲಕ್ಷ ಹಣ ಕದ್ದ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ ಘಟನೆ ಇತ್ತಿಚೆಗೆ ಮುಂಡಗೋಡದಲ್ಲಿ ಜರಗಿದ ಬಿಜೆಪಿಯ ಪರಿವರ್ತನ ಸಮಾವೇಶದ ಸಂದರ್ಭದಲ್ಲಿ ಜರಗಿದೆ.
ಹಣವನ್ನು ಕಳೆದುಕೊಂಡ ವ್ಯಕ್ತಿಯನ್ನು ತಾಲೂಕಿನ ಮಳವಳ್ಳಿ ಗ್ರಾಮದ ಮಂಜುನಾಥ್ ಎಂದು ಗುರುತಿಸಲಾಗಿದ್ದು ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.
ಜೋಳ ಮಾರಿ ಬಂದ ಒಂದು ಲಕ್ಷ ಹಣವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ ಮಂಜುನಾಥ್ ಯಡ್ಯೂರಪ್ಪರ ಫೋಟು ಕ್ಲಿಕ್ಕಿಸುವ ಸಂದರ್ಭದಲ್ಲಿ ಕಳ್ಳರು ಜೇಬಿಗೆ ಕತ್ತರಿಯನ್ನು ಹಾಕಿ ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ಸಮಾವೇಶದ ಸ್ಥಳದಲ್ಲಿ ಜೋರಾಗಿ ಅಳುತ್ತ ನಿಂತಿದ್ದು ಸಮಾವೇಶಕ್ಕೆ ಬಂದ ಜನರ ಗಮನ ಸೆಳೆಯುವಂತೆ ಮಾಡಿತ್ತು.