ಮುಂಡಗೋಡ :  ನೇಣಿಗೆ ಕೊರಳೊಡ್ಡಿ ಯುವಕನ ಆತ್ಮಹತ್ಯೆ

Source: nazir | By Arshad Koppa | Published on 23rd October 2017, 8:11 AM | Coastal News |

ಮುಂಡಗೋಡ : ಯುವಕ ನೋರ್ವ ನೇಣಿಗೆ  ಕೊರಳಡ್ಡಿ ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ತಟ್ಟಿಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ತಟ್ಟಿಹಳ್ಳಿ ಗ್ರಾಮದ ಕಿರಣ ಶಿಗ್ಗಾಂವ(23) ಎಂದು ತಿಳಿದು ಬಂದಿದೆ.
ಈತ ಟಿಬೇಟ್ ಕ್ಯಾಂಪ್ ನಲ್ಲಿ ರಿಕ್ಷಾ ಭಾಡಿಗೆಯಿಂದ ಓಡಿಸುತ್ತಿದ್ದನು ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು ಎಂದು ಹೇಳಲಾಗುತ್ತಿದೆ.
ಭಾನುವಾರ ಬೆಳಗ್ಗೆ ಮನೆಯವರೆಲ್ಲರೂ ಗೋವಿನ ಜೋಳ ಹರಿಯಲು ಹೊಲಕ್ಕೆ ಹೋಗಿದ್ದಾರೆ ಮೃತ ಕಿರಣ ಸಹ ಹೋಗಿದ್ದಾನೆ. ಹೊಲದಲ್ಲಿರುವ ಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈತನು ಬಹಳ ಹೊತ್ತಾದರು ಕಾಣದೇ ಇರುವಾಗ ನೋಡಲು ಹೊಲದ ಮನೆಗೆ ಬಂದಾಗ ನೇಣುಬೀಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರವುದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ 

Read These Next