ಮುಂಡಗೋಡ; ಕಣ್ಣು ಮಾನವನ ಜೀವಾಳ, ಬದುಕಿನ ಮೌಲ್ಯ ಕಟ್ಟಿಕೂಳ್ಳಲು ಕಣ್ಣು ಅವಶ್ಯ ಎಂದು ಜಿಲ್ಲಾ ಪಂಚಾಯತ ಸದಸ್ಯ, ಜಿಪಂ ಆರೋಗ್ಯ ಮತ್ತುಶಿಕ್ಷಣ ಸ್ಥಾಯಿ ಸಮಿತಿ ಅದ್ಯಕ್ಷರು ಎಲ್.ಟಿ.ಪಾಟೀಲ ಹೇಳಿದರು.
ಅವರು ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಅರ್.ಸೆಟಿ ಸಂಸ್ಥೆ (ರಿ) ಹಳಿಯಾಳ , ಶಾಖೆ ಮುಂಡಗೋಡ , ರೋಟರಿ ಕಣ ್ಣನ ಆಸ್ಪತ್ರೆ ಶಿರಸಿ, ಜಿಲ್ಲಾ ಆರೋಗ್ಯ ಹಾಗು ಕುಟುಂಬ ಕಲ್ಲ್ಯಾಣ ಇಲಾಖೆ ಕಾರವರ , ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಕಾರವಾರ, ತಾಲೂಕಾ ಆಸ್ಪತ್ರೆ ಮುಂಡಗೋಡ, ವತಿಯಿಂದ ಹಮ್ಮಿಕೊಳ್ಳಲಾದ ಉಚಿತ ಕಣ ್ಣನ ಪೊರೆ ತಪಾಸಣೆ ಹಾಗು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರ.
ಬಡವರು, ದೀನ ದಲಿತರಿಗೆ ಸಹಾಯವಾಗತಿದ್ದು ಸರಕಾರಿ ಆಸ್ಪತ್ರೆ, ರೋಟರಿ ಆಸ್ಪತ್ರೆ. ಕೆನರಾಬ್ಯಾಂಕ ದೇಶಪಾಂಡೆ ಆರ್.ಸೆಟಿ ಸಂಸ್ಥೆಗಳು ಈ ಶಿಬಿರವನ್ನು ಸಂಘಟಸಿ ಪ್ರತಿ ವóರ್ಷ ನಡೆಸಿಕೂಂಡು ಬಂದಿರುವುದು ಆತ್ಯಂತ ಹೆಮ್ಮೆಯ ವಿಷಯವಾಗಿದೆ, ಅವರ ಸಮಾಜಮುಖಿ ಕಾರ್ಯಕ್ಕೆ ಯಾವತ್ತು ನಮ್ಮ ಬೆಂಬಲವಿದೆ ಎಂದರು.
ಶಿರಸಿ ರೋಟರಿ ಆಸ್ಪತ್ರೆಯ ಗಿರೀಶ ಮೇಟಿ ರವರು ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ರವೀಂದ್ರ ರೇವಣಕರ್ ನಿರ್ದೆಶಕರು ಕೆನರಾಬ್ಯಾಂಕ ದೇಶಪಾಂಡೆ ಆರ್. ಸಟಿ ಹಳಿಯಾಳ,ರವರು ಮಾತನಾಡಿ ನಮ್ಮ ಸಂಸ್ಥೆ ಶಿಕ್ಷಣ, ಕಲೆ, ಕ್ರೀಡೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದೆ, ಅಲ್ಲದೆ ಇವತ್ತಿನ ಶಿಬಿರದಲ್ಲಿ ಕಣ್ಣಿನ ಪೊರೆ ತಪಾಷಣೆ ಮಾಡಿ ಆಯ್ಕೆಯಾದ ಅಭ್ಯರ್ಥಿಗಳನ್ನು ರೋಟರಿ ಕಣ್ಣಿನ ಆಸ್ಪತ್ರೆಗೆ ಕರೆದುಕೂಂಡು ಹೋಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿ ಕಳುಹಿಸಿಲಾಗುವದು, ಅವಶ್ಯವಿರುವವರು ಇದರ ಪ್ರಯೋಜನವನ್ನು ಪಡೆದು ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಳ್ಳಿ ಎಂದು ಹೇಳಿದರು
ತಾಲೂಕಾ ಆರೋಗ್ಯ ಶಿಕ್ಷಣ ಸಂಯೋಜಕ ಪ್ರಮೋದ ಪಡ್ತಿ, ಪ್ರಸ್ತಾವಿಕ ಮಾತನಾಡಿದರು ಈ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆ ಆಡಳಿತಾಧಿಕಾರಿ ಡಾ:ಕಿರಣ ಕುಲಕಣ ್, ಪಟ್ಟಣ ಪಂಚಾಯತಸದಸ್ಯರು, ಡಾ:ಪ್ರಮೋದ ಸಂಯೋಜಕರು ರೋಟರಿ ಆಸ್ಪತ್ರೆ, ಡಾ: ಮಾರುತಿ, ಕಲ್ಯಾಣ ಶೆಟ್ಟಿ, ಉಪಸ್ಥಿತರಿದ್ದರು.ಮಹಾಬಲೇಶ್ವರ ನಾಯ್ಕ ಸಿ ಬಿ ಡಿ ಆರ್ ಸೆಟಿ ಮುಂಡಗೋಡ ವಂದಿಸಿದರು, ಈರಯ್ಯಾ ಚಿಕ್ಕಮಠ ಸಮುದಾಯ ಸಂಘಟಕರು, ನಿರೂಪಿಸಿದರು ಸಂಸ್ಥೆಯ ಶಾಂತಕುಮಾರ, ಹಾಗೂ ವಿನಾಯಕ ಸುಣಗಾರ ಸಂಘಟಿಸಿದರು.