ಮುಂಡಗೋಡ:ತರಕಾರಿ ಕೊಳ್ಳುವಾಗ ಮೊಬೈಲ್ ಎಗರಿಸಿದ ಕಳ್ಳರು
ಮುಂಡಗೋಡ (ಹಳಿಯಾಳ) : ತರಕಾರಿ ಕೊಂಡುಕೊಳ್ಳುವ ಸಂದರ್ಭದಲ್ಲಿ ಜೇಬಿನಿಂದ ಮೊಬೈಲ್ ನ್ನು ಕಳ್ಳರು ಕದ್ದುಕೊಂಡು ಹೋದ ಘಟನೆ ಕುರಿತು ಹಳಿಯಾಳ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಳಿಯಾಳ ಪಟ್ಟಣದ ಮೇನ್ ಬಜಾರನಲ್ಲಿ 13-8-2017 ರಂದು ದೂರುದಾರ ಅಶೋಕ ಕೆಂಪಣ್ಣವರ ತರಕಾರಿ ಕೊಳ್ಳುತ್ತಿರುವಾಗ ಕಳ್ಳರು ತಮ್ಮ ಕೈಚಳಕ ತೋರಿಸಿ ಸುಮಾರು 17000=00 ರು ಬೆಲೆ ಬಾಳುವ ಒಪ್ಕೋ ಮೊಬೈಲ್ ನ್ನು ಎಗರಿಸಿದ್ದಾರೆ. ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸ ಠಾಣೆಯಲ್ಲಿ 22-8-2017 ಕ್ಕೆ ಅಶೋಕ ಕೆಂಪಣ್ಣವರ ದೂರು ದಾಖಲಿಸಿದ್ದಾರೆ