ಮುಂಡಗೋಡ: ಅಕ್ರಮ ಜಾನುವಾರು ಸಾಗಾಟ : ಚಾಲಕನ ಬಂಧನ

Source: nazir | By Arshad Koppa | Published on 22nd August 2017, 8:23 AM | Coastal News | Special Report |

ಮುಂಡಗೋಡ : ತಾಲೂಕಿನ ಕುಸೂರ ಕ್ರಾಸ್ ಹತ್ತಿರ ಟಾಟಾ.ಎಸ್ ವಾಹನದಲ್ಲಿ ಜಾನುವಾರಗಳನ್ನು ಅಕ್ರಮವಾಗಿ ಸಾಗಾಟ ಮಾಡುವ ಸಂದರ್ಭದಲ್ಲಿ ಪೊಲೀಸರು ದಾಳಿ ಮಾಡಿ ಜಾನುವಾರಗಳ ಸಮೇತ ಚಾಲಕನನ್ನು ಬಂಧಿಸಿದ್ದಾರೆ.


ಹಾನಗಲ್ ತಾಲೂಕಿನ ಯಳ್ಳೂರ ಗ್ರಾಮದ ಸಂತೋಷ ಹುಣಸಿಕಟ್ಟಿ ಬಂಧಿತ ವಾಹನ ಚಾಲಕನಾಗಿದ್ದಾನೆ. 
ವಾಹನದಲ್ಲಿ ಒಂದು ಹೋರಿ, ಒಂದು ಹೋರಿ ಮರಿ, ಎರಡು ಕೋಣ, ಎರಡು ಎಮ್ಮೆ ಕರು ಇತ್ತು. ಬಂಧಿತ ವಾಹನ ಚಾಲಕನು ಈ ಜಾನುವಾರುಗಳಿಗೆ ಆಹಾರ ನೀರು ನೀಡದೇ ಮಲಗಲು ಸಾಧ್ಯವಾಗದ ರೀತಿಯಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ನಂದಿಕಟ್ಟಿ ಗ್ರಾಮದಿಂದ ಉಗ್ಗಿನಕೇರಿ ಮಾರ್ಗವಾಗಿ ಹಾನಗಲ್ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಎನ್ನಲಾಗಿದೆ. 
ಕುಸೂರ ಕ್ರಾಸ್ ಹತ್ತಿರ ಪಿ.ಎಸ್.ಐ. ಲಕ್ಕಪ್ಪ ನಾಯ್ಕ ಹಾಗೂ ಪೊಲೀಸ ಸಿಬ್ಬಂದಿಗಳು ದಾಳಿ ಮಾಡಿ ಜಾನುವಾರುಗಳನ್ನು ಮತ್ತು ವಾಹನ ಚಾಲಕನನ್ನು ಬಂಧಿಸಿದ್ದಾರೆ. ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...