ಮುಂಡಗೋಡ: ರಾಜ್ಯದ ಸಿದ್ದರಾಮಯ್ಯ ಸರ್ಕಾರ ರೈತ ಹಾಗೂ ಜನ ಪರವಾದ ಕೆಲಸ ಮಾಡುವಲ್ಲಿ ಸಂಪೂರ್ಣ ವಿಪಲವಾಗಿದೆ. ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಬಗ್ಗೆ ರೋಷಿಹೋಗಿರುವ ರಾಜ್ಯದ ಜನತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರೆ. ಮುಂದಿನ 2018 ರ ವಿಧಾನಸಭಾ ಚುನಾವಣೆ ಸಂಪೂರ್ಣ ಕುಮಾರಣ್ಣನ ಚುನಾವಣೆಯಾಗಲಿದೆ ಎಂದು ಜೆ.ಡಿ.ಎಸ್ ರಾಜ್ಯ ರೈತ ಮೋರ್ಚಾಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಹೇಳಿದರು.
ಗುರುವಾರ ಇಲ್ಲಿಯ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ರೈತ ಪರವಾದ ಪಕ್ಷ ಯಾವುದಾದರೂ ಇದೆ ಎಂದಾದರೆ ಅದು ಜೆಡಿಎಸ್ ಮಾತ್ರ. 20 ತಿಂಗಳ ಕುಮಾರಸ್ವಾಮಿ ಅವರ ಜನಪರ ಆಡಳಿತದಲ್ಲಿ ರೈತ ಪರವಾದ ಬಹುತೇಕ ಸಮಸ್ಯೆಗಳನ್ನು ಪರಿಹರಿಸಿ ಜನರ ಮೆಚ್ಚುಗೆ ಪಡೆದಿದ್ದಾರೆ. ರೈತ ಕುಲ ಸಂತೋಷವಾಗಿರಬೇಕಾದರೆ ಜಾತ್ಯತೀತ ಜನತಾ ದಳ ಮತ್ತೆ ಅಧಿಕಾರಕ್ಕೆ ಬರಬೇಕಿರುವುದು ಅನಿವಾರ್ಯ. ವರ್ಷ ಕಳೆದರೂ ಕಳಸಾ ಬಂಡೂರಿ ಯೋಜನೆ ಸಮಸ್ಯೆಯನ್ನು ರಾಜ್ಯದ ಕಾಂಗ್ರೆಸ್ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದಿಂದ ಸಾದ್ಯವಾಗಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕಾಗಿ ಕಚ್ಚಾಟದಲ್ಲಿಯೇ ಕಾಲಹರಣ ಮಾಡುತ್ತಿರುವುದರಿಂದ ನಾವು ಇಂದು ಬೇರೆ ರಾಜ್ಯದವರಿಗೆ ನೀರು ಕೇಳುವಂತಹ ಪರಿಸ್ಥಿತಿ ಬಂದೊದಗಿದೆ. ಅವರಿಗೆ ಜನರಿಗಿಂತ ಅಧಿಕಾರವೇ ಮುಖ್ಯವಾಗಿದೆ. ಹಾಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಛಿಮಾರಿ ಹಾಕಿ ಪ್ರಾದೇಶಿಕ ಪಕ್ಷಕ್ಕೆ ಅವಕಾಶ ನೀಡಬೇಕಿದೆ. ಕೇವಲ ಬರಗಾಲ ಘೋಸಿಸುವುದರಿಂದ ಪ್ರಯೋಜನವಾಗುವುದಿಲ್ಲ. ಅದಕ್ಕೆ ತಕ್ಕಂತೆ ಸೂಕ್ತ ಪರಿಹಾರ ಯೋಜನೆ ರೂಪಿಸಬೇಕು. ಪರಿಹಾರ ನೀಡುವಲ್ಲಿ ವಿಳಂಬ ಹಾಗೂ ತಾರತಮ್ಯ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಕೂಡ ಎಡವಿದೆ ಎಂದು ಆರೋಪಿಸಿದರು.
ಜೆ ಡಿ.ಎಸ್ ದುರೀಣ ಸಂತೋಷ ರಾಯ್ಕರ, ತುಕಾರಾಮ ಗುಡ್ಕರ, ಮುನಾಫ್ ಮಿರ್ಜಾನಕರ, ಕೇಮಣ್ಣ ಲಮಣ , ನಾಗೇಶ ನಾಯ್ಕ, ಗುರುನಾಥ ಬೆಳವಟಗಿ ಮುಂತಾದವರು ಉಪಸ್ಥಿತರಿದ್ದರು.