ಮುಂಡಗೋಡ:ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ.: ಡಾ: ಕುಲಕರ್ಣಿ

Source: nazir | By Arshad Koppa | Published on 13th August 2017, 11:35 AM | Coastal News | Guest Editorial |

ಮುಂಡಗೋಡ : ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠ. ಒಬ್ಬ ಮನಷ್ಯನ ರಕ್ತವು ಇನ್ನೊಂದು ಮನುಷ್ಯನ ಜೀವ ಉಳಿಸುತ್ತದೆ. ಸ್ವಯಂ ಪ್ರೇರಿತರಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ರಕ್ತಕೊಡುವುದಕ್ಕೆ ರಕ್ತದಾನ ಎನ್ನುತ್ತಾರೆ ಎಂದು ತಾಲೂಕಾ ವೈದ್ಯಾಧಿಕಾರಿ ಕಿರಣ ಕುಲಕರ್ಣಿ ಹೇಳಿದರು. 


ಅವರು ರಕ್ತಶೇಖರಣಾ ಘಟಕ ಹಾಗೂ ತಾಲೂಕ ಆಸ್ಪತ್ರೆ ಮುಂಡಗೋಡ, ಆಯ್ ಎಮ್.ಆಯ್ ಬ್ಲಡ್ ಬ್ಯಾಂಕ್ ಶಿರಸಿ, ಆಯ್.ಎಮ್.ಆಯ್  ಮುಂಡಗೋಡ ರೊಟರಿ ಕ್ಲಬ್, ರಾಜ್ಯ ಸರಕಾರಿ ನೌಕರರ ಸಂಘ, ಎನ್‍ಎಸ್‍ಎಸ್  ಪಾಲಿಟೆಕ್ನಿಕ್ ಮುಂಡಗೋಡ, ಎನ್‍ಎಸ್‍ಎಸ್  ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ ನ್ಯಾಸರ್ಗಿ, ಸರಕಾರಿ ಪ್ರಥಮ ದರ್ಜೆಕಾಲೇಜ ಮುಂಡಗೋಡ ಹಾಗೂ ಪತ್ರಕರ್ತರ ಸಂಘ ಮುಂಡಗೋಡ
ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ  ಪಟ್ಟಣದ  ಸರಕಾರಿ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬೀರ ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸದೃಡ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಲು ಮುಂದೆ ಬರಬೇಕು.ಅಪಘಾತಗಳಲ್ಲಿ ರೋಗಿಗೆ ರಕ್ತವು ಅವಶ್ಯವಾಗಿತ್ತದೆ ಹಾಗೆ ತುರ್ತು ಶಸ್ತ್ರರಚಿಕಿತ್ಸಾಗಳಲ್ಲಿ ರಕ್ತವು ಅವಶ್ಯವಾಗಿ ಬೇಕಾಗಿರುತ್ತದೆ ಎಂದರು. ಮುಂಡಗೋಡ ಸರಕಾರಿ ಆಸ್ಪತ್ರೆಯಲ್ಲಿ ರಕ್ತಶೇಖರಣಾ ಘಟಕವು ಪ್ರಾರಂಭವಾಗಿದೆ ಇದರಿಂದ ಸ್ಥಳಿಯ ರೋಗಿಗಳಿಗೆ ಪ್ರಯೋಜನವಾಗುತ್ತದೆ ಎಂದರು ರಕ್ತದಾನ ಮಾಡಲು ಇಚ್ಚಿಸುವವರು 18-45 ವಯಸ್ಸಿನ ಒಳಗಿನವರಾಗಿರಬೇಕು. ಬಿ.ಪಿ., ಹೃದ್ರೋಗಿಗಳು ರಕ್ತದಾನ ಮಾಡಲು ಅವಕಾಶವಿಲ್ಲ. ಶುಗರ ನಾರ್ಮಲ್ ಇದ್ದವರು ರಕ್ತದಾನ ಮಾಡಬಹುದು ಎಂದರು.

ರಕ್ತದಾನ ಶಿಬೀರದಲ್ಲಿ ಭಾಗವಹಿಸಿದ ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್ 30 ಕ್ಕಿಂತ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಸರಕಾರಿ ನೌಕರ ಸಂಘದ ಸದಸ್ಯರು, ಆರೋಗ್ಯ ಇಲಾಖೆಯ  ವೈದ್ಯಾಧಿಕಾರಿಗಳು, ಹಾಗೂ ಸಿಬ್ಬಂದಿಗಳು ರಕ್ತದಾನ ಮಾಡಿದರು ಒಟ್ಟು 70 ಜನರು ರಕ್ತದಾನ ಮಾಡಿದ್ದಾರೆ ಎಂದು ಹೇಳಲಾಗಿದೆ

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...