ಮುಂಡಗೋಡ : ಬಿಜೆಪಿ ಪಕ್ಷದ ಕೇಂದ್ರ ಸರ್ಕಾಕ್ಕೆ ರೈತರ ಮೇಲೆ ಕಳಕಳಿ ಇದ್ದರೆ ಸಾಲಾ ಮನ್ನಾ ಮಾಡಲಿ ಎಂದು ಬಿ.ಜೆ ಪಿ. ರಾಜ್ಯ ನಾಯಕರಿಗೆ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಶುಕ್ರವಾರದಂದು ತಾಲೂಕಿನ ನಂದಿಗಟ್ಟಾ ಹುನುಗುಂದ ಗ್ರಾಮ ಪಂಚಾಯತ ವ್ಯಾಪ್ತಿಯಹೊಸ ಭೂತ ಕಮೀಟಿಗಳನ್ನ ರಚಿಸುವ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದರು.
ರಾಜ್ಯ ಬಿಜೆಪಿ ಪಕ್ಷದವರಿಗೆ ವಿಧಾನ ಸಭೆಯ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡುತ್ತಿದ್ದರು. ಆದರೆ ಈಗಾಗಲೇ ನಮ್ಮ ಸರ್ಕಾರ ರಾಜ್ಯದ ಸಹಕಾರಿ ಸಂಘಗಳಲ್ಲಿ ರೈತರು ಪಡೆದಿರುವ ಬೆಳೆಸಾಲದಲ್ಲಿ 50 ಸಾವಿರ ರೂ ನಷ್ಟು ಸಾಲ ಮನ್ನಾ ಮಾಡಿದ್ದೆವೆ ರಾಜ್ಯದ ಬಿ.ಜೆ.ಪಿಯವರು ರೈತರ ಬಗ್ಗೆ ಮೋಸಳೆ ಕಣ ್ಣರು ಹಾಕುವುದು ಬಿಟ್ಟು ರೈತರ ಶೇ 77 ರಷ್ಟು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿರುವ ಬೆಳೆ ಸಾಲವನ್ನು ಮನ್ನಾ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.
ಮುಂಬರುವ ವಿಧಾನ ಸಭಾ ಚುನಾವಣೆಯ 10 ತಿಂಗಳ ಪೂರ್ವದಲ್ಲಿ ಪಕ್ಷದ ಕಾರ್ಯಕರ್ತರ ಕುಂದುಕೊರತೆ ಬಗ್ಗೆ ಪ್ರತ್ಯಕ್ಷವಾಗಿ ತಿಳಿದುಕೊಳ್ಳಲು ನಿಮ್ಮ ಮುಂದೆ ಸಾಮನ್ಯ ಕಾರ್ಯಕರ್ತನಾಗಿ ಬಂದಿದ್ದೆನೆ. ಹಾಗಾಗಿ ಕಳೆದ ಒಂದು ವಾರದಿಂದ ಕ್ಷೇತ್ರದ 42 ಗ್ರಾಮ ಪಂಚಾಯತಿಗಳ 226 ಭೂತಗಳಲ್ಲಿ ಹೋಸ ಯವುಕರ ಭೂತ ಕಮೀಟಿ ರಚಿಸಿ ಮುಂದಿನ ದಿನದಲ್ಲಿ ತಾಲೂಕಿನಲ್ಲಿ ಬೃಹತ ಕಾಂಗ್ರೆಸ್ ಕಾರ್ಯಯರ್ತರ ಸಭೆಯನ್ನು ಮಾಡಲಾಗುವುದು, ಇದರ ಜೋತೆಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲವನ್ನು ಮನ್ನಾ ಮಾಡುವ ಬಗ್ಗೆ ಹೊಸ ಅಭಿಯಾನವನ್ನು ನಾವುಗಳು ಈ ಕಾರ್ಯಕ್ರಮಗಳಲ್ಲಿ ಕೈಗೊಂಡಿದ್ದೆವೆ. ಎಂದ ಅವರು ಕಾರ್ಯಕರ್ತರನ್ನು ಹುರಿದುಂಭಿಸಲು ಈ ಹಿಂದೆ ಹಳೆ ಬೂತ ಕಮೀಟಿ ಇತ್ತು ಅವರ ಕಾಲದಲ್ಲಿ ಎಷ್ಟುಬಾರಿ ಅಧಿಕಾರ ಬಂದಿದೆ ಮತ್ತು ಈಗ ರಚಿಸುತ್ತಿರುವ ಯುವ ಕಮೀಟಿಯವರು ಎಷ್ಟು ಭಾರಿ ಅಧಿಕಾರ ಕೊಡುಸುತ್ತಿರಿ ನೋಡೊಣಾ ಎಂದು ನೂತನವಾಗಿ ರಚನೆಗೊಂಡ ಭೂತ ಕಮೀಟಿಯ ಯುವಕರಿಗೆ ಹುರಿದುಂಬಿಸಿದರು.
ಈ ಸಂಧರ್ಭದಲ್ಲಿ ಜಿ.ಪಂ, ಸದಸ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ್, ಗುಂಜಾವತಿ ಗ್ರಾ.ಪಂ, ಅಧ್ಯಕ್ಷ ಬಸಯ್ಯಾ ನಡುವಿಮನಿ, ಮುಖಂಡರುಗಳಾದ ಎಚ್.ಎಮ್.ನಾಯ್ಕ, ಸಿದ್ದಪ್ಪಾ ಹಡಪದ, ಪ್ರಶಾಂತ ಲಮಾಣ , ಯುವ ಮುಖಂಡರುಗಳಾದ ಆಸೀಫ್ ಮಕಾಂದಾರ, ಹಜರತ್ ಅಲಿ, ಮುಂತಾದವರು ಉಪಸ್ಥಿತರಿದ್ದರು.
Read These Next
ಕಾಂಗ್ರೇಸ್ ಯುವರಾಜನ ಆಗಮನದ ನಿರೀಕ್ಷೆಯಲ್ಲಿ ಉ.ಕ.ಜಿಲ್ಲೆ
• ಭಟ್ಕಳದಲ್ಲಿ ಬೃಹತ್ ಸಮಾವೇಶ ...
ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು
ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ...
ಮೋಸ ಮಾಡಿದ ಬಿಜೆಪಿಯನ್ನು ನಾಮಧಾರಿ ಸಮಾಜ ಬೆಂಬಲಿಸದು-ಆರ್.ಎನ್.ನಾಯ್ಕ
ಭಟ್ಕಳ: ತಾಲೂಕಿನಲ್ಲಿ ಮುಂಬರುವ ವಿದಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಲವಾರು ಊಹಾ ಪೋಹಗಳೂ ಕೇಳಿ ಬಂದಿದ್ದು ಎಲ್ಲವಕ್ಕೂ ಕೂಡಾ ...
ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ
ಭಟ್ಕಳ: 79ನೇ ಭಟ್ಕಳ ವಿಧಾನ ಸಭಾ ಚುನಾವಣೆ ಮೇ. 12ರಂದು ನಡೆಯಲಿದ್ದು ಸೋಮವಾರ ಬಿ.ಜೆ.ಪಿ. ಅಭ್ಯರ್ಥಿ ಸುನಿಲ್ ನಾಯ್ಕ ನಾಮಪತ್ರ ಸಲ್ಲಿಸಿದರು.
ಗೌಜಿ ಗದ್ದಲವಿಲ್ಲದೆ ಕಾಂಗ್ರೇಸ್ ಅಭ್ಯರ್ಥಿ ಮಾಂಕಾಳ್ ವೈದ್ಯ ನಾಮಪತ್ರ ಸಲ್ಲಿಕೆ
ಭಟ್ಕಳ: ಮೇ. 12ರಂದು ನಡೆಯಲಿರುಯವ ಭಟ್ಕಳ ವಿಧಾನ ಸಭಾ ಚುನಾವಣೆಗೆ 79ನೇ ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ...
ಭಟ್ಕಳ: ಮತ್ಸ್ಯಗಂಧ ರೈಲಿನಲ್ಲಿ ಅನಧಿಕೃತ ಲಿಕ್ಕರ್ ಜಪ್ತು
ಭಟ್ಕಳ: ಗೋವಾದಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಮತ್ಸ್ಯಗಂಧ ರೈಲಿನಲ್ಲಿ ರವಿವಾರ 340 ಬಾಟಲು ಲಿಕ್ಕರ್ ನ್ನು ರೈಲ್ವೆ ...
“500 ಕೋಟಿ ಖರ್ಚು ಮಾಡಿದ್ರೂ ಬಿಜೆಪಿ ಅಧಿಕಾರಕ್ಕೆ ಬರೊಲ್ಲ’; ಬಿಟಿವಿ ಕುಟುಕು ಕಾರ್ಯಚರಣೆಯಲ್ಲಿ ಬಹಿರಂಗ
ಬೆಂಗಳೂರು: ಬಿ,ಎಸ್.ಯಡಿಯೂರಪ್ಪ ಹಾಗು ಅನಂತ್ ಕುಮಾರ್ ನಡುವೆ ಶೀತಲ ಸಮರ ನಡೆಯುತ್ತಿದೆ. ಜಗದೀಶ್ ಶೆಟ್ಟರ್, ಆರ್.ಅಶೋಕ್ ಮತ್ತು ...
ಭಟ್ಕಳದಲ್ಲಿ ಏರುತ್ತಿದೆ ರಾಜಕೀಯ ತಾಪಮಾನ
ಭಟ್ಕಳ: ಇನ್ನೇನು ವಿಧಾನಸಭಾ ಚುನಾವಾಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ದಿನಾಂಕ ಹತ್ತಿರವಾಗುತ್ತಿದ್ದಂತೆ ಆಕಾಂಕ್ಷಿ ...
ಆರೋಗ್ಯ ಸೇವಾ ವಲಯವು ಸಂಪೂರ್ಣವಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಸೇರಬೇಕು
ಆರೋಗ್ಯ ಸೇವೆಯು ಒಂದು ಸಾರ್ವಜನಿಕ ಹೊಣೆಗಾರಿಕೆಯಾಗಿದ್ದು ಪ್ರಭುತ್ವದ ಜವಾಬ್ದಾರಿಯಾಗಿದೆಯೆಂಬುದನ್ನು ಭಾರತದ ಸರ್ಕಾರವು ...
ಶಾಲಾ ಶಿಕ್ಷಣದ ಮರುಪರೀಕ್ಷೆಯಾಗಬೇಕಿದೆ
ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನದಲ್ಲಿ ಪರೀಕ್ಷೆಗಳು ಒಂದು ಸಣ್ಣ ಭಾಗವಷ್ಟೇ ಆಗಿರಬೇಕು.
ರಾಮನವಮಿಯಿಂದ ರಾಮಮಂದಿರದವರೆಗೆ..
ಪೂರ್ವಭಾರತದಲ್ಲಿ ಕೋಮುಗಲಭೆಗಳನ್ನು ಬರಲಿರುವ ಚುನಾವಣೆ ಹಾಗೂ ಅದರಾಚೆಗಿನ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡೇ ನಡೆಸಲಾಗಿದೆ.
ಭಟ್ಕಳ-ಹೊನ್ನಾವರ ವಿಧಾನಸಭಾ ಚುನಾವಣೆ; ಕಾಂಗ್ರೇಸ್ ಬೆಂಬಲಕ್ಕೆ ನಿಂತ ಕೆನರಾ ಕಲೀಝ್ ಕೌನ್ಸಿಲ್
ಭಟ್ಕಳ: ಕರಾವಳಿಯ ಶರಾವತಿ ನದೀ ತೀರದ ಸುಮಾರು 29ಕ್ಕೂ ಹೆಚ್ಚು ಜಮಾಅತ್ ಗಳ ಒಕ್ಕೂಟವಾಗಿರುವ ಗಲ್ಫ್ನಲ್ಲಿ ಸ್ಥಾಪಿತ ಕೆನರಾ ಮುಸ್ಲಿಮ್ ...