ಮುಂಡಗೋಡ :ಭತ್ತದ ಬೆಳಗೆ ಸೈನಿಕ ಹುಳುವಿನ ಬಾಧೆ

Source: nazir | By Arshad Koppa | Published on 14th October 2017, 11:23 AM | Coastal News | Special Report |

ಮುಂಡಗೋಡ : ತಾಲೂಕಿನಲ್ಲಿ ಭತ್ತದ ಬೆಳಗೆ ತೆನೆ ಕತ್ತರಿಸುವ ಸೈನಿಕ ಹುಳುವಿನ ಬಾಧೆ ಕಂಡು ಬಮದಿದ್ದು ರೈತರು ಸೂಕ್ತ ಔಷಧಿ ಸಿಂಪಡಿಸುವುದರಿಂದ ಬೆಳೆ ರಕ್ಕಷಣೆ ಮಾಡಿಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ತಿಳಿಸಿದ್ದಾರೆ
ತಾಲೂಕಿನ ಗುಂಜಾವತಿ ಮೈನಳ್ಳಿ,  ಹುನುಗುಂದ, ಚವಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಈ ಕೀಟಬಾಧೆ ಕಂಡು ಬಂದಿದೆ. ಕೃಷಿ ಕೀಟ ತಜ್ಞೆ ರೂಪಾ ಪಾಟೀಲ(ಶಿರಸಿ) ಹಾಗೂ ಮುಂಡಗೋಡ ಕೃಷಿ ಇಲಾಖೆ ಸಿಬ್ಬಂದಿಗಳು ಆಯಾ ಗದ್ದೆಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಿ ರೈತರಿಗೆ ಸಲಹೆಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು
ಈ ತೆನೆ ಕತ್ತರಿಸುವ ಸೈನಿಕ ಹುಳುಗಳು ಹಗಲು ಹೊತ್ತಿನಲ್ಲಿ ಭತ್ತದ ನೆಳೆಯ ವಿಲಯ ಕೆಳಗೆ ಹಾಗೂ ಮಣ್ಣಿನಲ್ಲಿ ಅಡಗಿರುತ್ತದೆ. ರಾತ್ರಿ ವೇಳೆಯಲ್ಲಿ ಭತತದ ತೆನೆಯನ್ನು ಕತ್ತರಿಸಿ ಹಾಕುತ್ತದೆ.
ಔಷಧ ತಯಾರಿಕೆ ವಿಧಾನ: ಒಂದು ಹೆಕ್ಟೇರ ಭತ್ತದ ಪ್ರದೇಶಕ್ಕೆ ಐವತ್ತು ಕೆಜಿ ಭತ್ತದ  ತೌಡು, ಐದು ಕೆಜಿ ಬೆಲ್ಲ, ಮನೋಕ್ರೋಟೊಪಾಸ್ 625ಮಿ.ಲೀ., ನೀರು 10 ಲೀ ಎಲ್ಲವನ್ನು ಮಿಶ್ರಣ ಮಾಡಿ 24 ಗಂಟೆಗಳ ಕಾಲ ಗಾಳಿಯಾಡದಂತೆ ಬಂದ್ ಮಾಡಿ ಇಡಬೇಕು ನಂತರ  ಸಂಜೆ 4 ಗಂಟೆಯ ನಂತರ ಈ ಔಷಧಿಯನ್ನು ಗದ್ದೆಯಲ್ಲಿ ಸಿಂಪಡಿಸಬೇಕು ಹೊಲದ ಸುತ್ತ ಬೋದು ಹರಿ ಅಗೆದು ಅದರಲ್ಲಿ ಫೆನ್ವೆವಲ್‍ರೆಟ್ ಅಥವಾ ಮೇಲಾಥಿಯನ್ ಪುಡಿ ಹಾಕಬೇಕು ಇದರಿಂದ ಕೀಟ ಒಮದು ಹೊಲದಿಂದ ಮತ್ತೊಂದು ಹಲಕ್ಕೆ ಹೋಗುವುದನ್ನು ತಪ್ಪಿಸಬಹುದು. ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವಂತೆ ಕೃಷಿ ಅಧಿಕಾರಿ ತಿಳಿಸಿದ್ದಾರೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...