ಮುಂಡಗೋಡ : ಬೆಂಕಿ ಆರಿಸಲು ಹೋದ ರೈತನಿಗೆ ಬೆಂಕಿ ತಗುಲಿ ರೈತನ ಸಾವು

Source: nazir | By Arshad Koppa | Published on 24th April 2017, 8:33 AM | Coastal News |

ಮುಂಡಗೋಡ:  ಬೆಂಕಿ ಆರಿಸಲು ಹೋದ ರೈತನಿಗೆ ಬೆಂಕಿ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಇಂದೂರ ಗ್ರಾಮದಲ್ಲಿ ಶನಿವಾರ ನಡೆದಿದೆ


ಇಂದೂರ ಗ್ರಾಮದ ಸುಭಾಸ ಫಕ್ಕಿರಯ್ಯ ಇಳಿಗೇರ (70) ಮೃತಪಟ್ಟ ರೈತನಾಗಿದ್ದಾನೆ. ಈತ ತನ್ನ ಜಮೀನಿನಲ್ಲಿ ಒಣಗಿದ ಗೋವಿನಜೋಳದ ಗಿಡಗಳನ್ನು ಸ್ವಚ್ಛಮಾಡಿ ಕಸದಗೆ ರಾಶಿಗೆ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗಿದ್ದು. ಗಾಳಿಯ ರಭಸಕ್ಕೆ ಬೆಂಕಿಯು ಪಕ್ಕದ ಜಮೀನಿನ ಬಾಳೆ ತೋಟಕ್ಕೆ ಬೆಂಕಿ ತಗುಲಿದೆ. ಗಾಭರಿಗೊಂಡ ರೈತ  ಬೆಂಕಿ ನಂದಿಸಲು ಹೋದಾಗ ರೈತನಿಗೆ ಬೆಂಕಿ ತಗುಲಿದೆ ಬೆಂಕಿಯಿಂದ ಚಿರಾಡಿದಾಗ ನೆರಹೊರೆಯ ಸಾರ್ವಜನಿಕರು ಈತನನ್ನು ಹೊರತಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯ ಈತನ ಪ್ರಾಣಪಕ್ಷೀ ಹಾರಿಹೋಗಿದೆ ಎಂದು ಹೇಳಲಾಗಿದೆ 
    ಈ ಕುರಿತು ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...