ಮುಂಡಗೋಡ : ಬೆಂಕಿ ಆರಿಸಲು ಹೋದ ರೈತನಿಗೆ ಬೆಂಕಿ ತಗುಲಿ ರೈತನ ಸಾವು
ಮುಂಡಗೋಡ: ಬೆಂಕಿ ಆರಿಸಲು ಹೋದ ರೈತನಿಗೆ ಬೆಂಕಿ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಇಂದೂರ ಗ್ರಾಮದಲ್ಲಿ ಶನಿವಾರ ನಡೆದಿದೆ
ಇಂದೂರ ಗ್ರಾಮದ ಸುಭಾಸ ಫಕ್ಕಿರಯ್ಯ ಇಳಿಗೇರ (70) ಮೃತಪಟ್ಟ ರೈತನಾಗಿದ್ದಾನೆ. ಈತ ತನ್ನ ಜಮೀನಿನಲ್ಲಿ ಒಣಗಿದ ಗೋವಿನಜೋಳದ ಗಿಡಗಳನ್ನು ಸ್ವಚ್ಛಮಾಡಿ ಕಸದಗೆ ರಾಶಿಗೆ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗಿದ್ದು. ಗಾಳಿಯ ರಭಸಕ್ಕೆ ಬೆಂಕಿಯು ಪಕ್ಕದ ಜಮೀನಿನ ಬಾಳೆ ತೋಟಕ್ಕೆ ಬೆಂಕಿ ತಗುಲಿದೆ. ಗಾಭರಿಗೊಂಡ ರೈತ ಬೆಂಕಿ ನಂದಿಸಲು ಹೋದಾಗ ರೈತನಿಗೆ ಬೆಂಕಿ ತಗುಲಿದೆ ಬೆಂಕಿಯಿಂದ ಚಿರಾಡಿದಾಗ ನೆರಹೊರೆಯ ಸಾರ್ವಜನಿಕರು ಈತನನ್ನು ಹೊರತಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯ ಈತನ ಪ್ರಾಣಪಕ್ಷೀ ಹಾರಿಹೋಗಿದೆ ಎಂದು ಹೇಳಲಾಗಿದೆ
ಈ ಕುರಿತು ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.