ಮುಂಡಗೋಡ ಏ21- ಪರ್ಲ್ ಅಗ್ರೊಟೆಕ ಕಾರ್ಪೊರೇಶನ ಲಿಮಿಟೆಡ್ (ಪಿ.ಎ.ಸಿ.ಎಲ್,) ಕಂಪನಿಯಲ್ಲಿ ಹಣ ತುಂಬಿಸುವಾಗ ಗ್ರಾಹಕರಿಗೆ ವಿಳಂಭ ಮಾಡದೇ ಸೆಬಿಯವರು ಕೂಡಲೇ ಹಣ ಹಿಂತಿರುಗಿಸುವಂತೆ ಮತ್ತು ಕಂಪನಿಯ ಪ್ರತಿನಿಧಿಗಳಿಗೆ ರಕ್ಷಣೆ ನೀಡುವ ಕುರಿತು (ಪಿ.ಎ.ಸಿ.ಎಲ್, ಕಂಪನಿಯ) ಮುಂಡಗೋಡ ತಾಲೂಕಿನ ಪ್ರತಿನಿಧಿಗಳು, (ಏಂಜೆಂಟರು) ತಹಶೀಲ್ದಾರವರ ಮುಖಾಂತರ ಮಾನ್ಯ ಪ್ರಧಾನ ಮಂತ್ರಿಗಳಿಗೆ, ಮತ್ತು ನಿವೃತ ನ್ಯಾಯ ಮೂರ್ತಿ ಆರ್.ಎಮ್, ಲೋದಾ ಕಮೀಟಿ, ಹಾಗೂ ಸೆಕ್ಯೂರಿಟಿ ಎಕ್ಷ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ), ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಜಿಲ್ಲಾಧಿಕಾರಿಗಳು ಕಾರವಾರ (ಉ.ಕ), ಪೋಲಿಸ್ ವರಿಷ್ಠಾಧಿಕಾರಿಗಳು ಕಾರವಾರ, ಹಾಗೂ ಆರಕ್ಷಕ ವೃತ್ತ ನೀರಿಕ್ಷಕರು ಪೋಲಿಸ್ ಠಾಣೆ ಮುಂಡಗೋಡರವರಿಗೆ ಶುಕ್ರವಾರದಂದು ಮನವಿ ಸಲ್ಲಿಸಿದರು.
ದಿನಾಂಕ 1-03-2014 ರಂದು ಸುಪ್ರೀಂ ಕೋರ್ಟ ಆದೇಶದ ಮೇರೆಗೆ ಸಿ.ಬಿ.ಐ, ನವರು ಕಂಪನಿಯ ಬಗ್ಗೆ ವಿಚಾರಣೆ ನಡೆಸಲು ಕಂಪನಿಯ ಬ್ಯಾಂಕ್ ಅಕೌಂಟ್ ಮುಟ್ಟುಗೋಲು ಮಾಡಿದರು, ನಂತರ ದಿನಾಂಕ 22-03-2014 ರಂದು ಸೆಬಿಯವರು ಕಂಪನಿಯು 5.85 ಕೋಟಿ ಗ್ರಾಹಕರಿಂದ ಸಂಗ್ರಹಿಸುವ ಹಣ 49.100 ಕೋಟಿ ಹಣವನ್ನು ಮೂರು ತಿಂಗಳ ಒಳಗಾಗಿ ಹಿಂತಿರುಗಿಸಲು ಆದೇಶ ಮಾಡಿತ್ತು.
ಈ ಆದೇಶದ ವಿರುಧ್ಧ ಕಂಪನಿಯು ಸೆಕ್ಯೂರಿಟಿ ಅಫಿಲೇಟ್ ಟ್ರಿಬ್ಯುನಲ್ಗೆ ಮೇಲ್ಮನವಿ ಸಲ್ಲಿಸಿತ್ತು. ಆ ಮೇಲ್ಮನವಿಯು ದಿನಾಂಕ 12-08-2015 ರಂದು ವಜಾ ಆಗಿರುತ್ತದೆ, ನಂತರ ಕಂಪನಿಯು ಸುಪ್ರೀಂ ಕೋರ್ಟಗೆ ಮೇಲ್ಮನವಿಯನ್ನು ಸಲ್ಲಿಸಿದ್ದು. ಅದರ ನಂ; ಸಿವಿಲ್ ಅಫೀಲ್ ನಂ; 13301/2015 ಮತ್ತು 13394/15 ಆಗಿರುತ್ತದೆ.
ಒದಗಿಸಬೇಕೆಂದು ಪಲ್ರ್ಸ್ ಅಗ್ರೊಟೆಕ ಕಾರ್ಪೊರೇಶನ ಲಿಮಿಟೆಡ್ (ಪಿ.ಎ.ಸಿ.ಎಲ್,) ಕಂಪನಿಯ ತಾಲೂಕಿನ ಎಲ್ಲ ಪ್ರತಿನಿಧಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಪರ್ಲ್ ಅಗ್ರೊಟೆಕ ಕಾರ್ಪೊರೇಶನ ಲಿಮಿಟೆಡ್ (ಪಿ.ಎ.ಸಿ.ಎಲ್,) ಕಂಪನಿಯ ತಾಲೂಕಿನ ಪ್ರತಿನಿಧಿಗಳಾದ, ವಾಯ್.ಪಿ.ಭುಜಂಗಿ, ಶಿವಾಜಿ ಎಮ್. ನಿಂಬಾಯಿ, ವಿರುಪಾಕ್ಷ ಪಾಟೀಲ್, ಬೀರು ಕಾತ್ರಟ್, ಬಾಷೆಸಾಬ ದುಂಡಶಿ, ಬಾಬು ಜಗ್ಗು ಕೊಕರೆ, ನವಲು ವಿಠ್ಠು ಮಿ¸ಳ, ಬೀರು ಬಾಬು ಕಾತ್ರಟ್, ಪೂಣ ್ಮಾ ಆರ್ ಅಂಗಡಿ, ಉಮೇಶ ಹೊಸಳ್ಳಿ, ಬಸವರಾಜ ಬಿ ಜಿನ್ನುರ, ವಿಶ್ವನಾಥ ಮುಡುರ, ಮುನಾಫ್ ಡಿ ದುಂಡಶಿ, Àಶೇಕಿರ ಅಹ್ಮದ್, ಅಮೀನಾಬಿ ಕಾಂಜಾದೆ, ಸಬೀಯಾ ಅತ್ತಾರ, ರಹೀಮಖಾನ ಬೆಂಡಿಗೇರಿ, ಮುಂತಾದವರಿದ್ದರು,