ಮುಂಡಗೋಡ: ಕಟ್ಟ ಕಡೆಯ ಜನಾಂಗ ಕೂಡ ಸೌಲಭ್ಯ ವಂಚಿತರಾಗಬಾರದೆಂಬ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿದೆ ಹಿಂದುಳಿದ ಬಡ ವರ್ಗದ ಸರ್ವಾಂಗೀಣ ಅಭಿವೃದ್ಧಿಯೇ ಕಾಂಗ್ರೆಸ್ ನ ಮೂಲ ಮಂತ್ರ ರಾಜ್ಯ ಕಾಂಗ್ರೆಸ ಸರ್ಕಾರ ಬಡ ಜನರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ , ಅವುಗಳ ಉಪಯೋಗ ಪಡೆದು ಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು
ಅವರು ತಾಲೂಕಿನ ಕಾತೂ ಗ್ರಾಮ ಪಂಚಯತ್ ವ್ಯಾಪ್ತಿಯ ಮರಗಡಿ ಗೌಳಿದಡ್ಡಿಯಲ್ಲಿ ಗ್ರಾಮೀಣಾಭಿವೃದ್ದಿ ಪಂಚಾಯತ ರಾಜ್ ಇಲಾಖೆ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಯ ನಮ್ಮ ಗ್ರಾಮ, ನಮ್ಮ ರಸ್ತೆ ಹಂತ-4 ಯೋಜನೆಯಡಿಯಲ್ಲಿ ಮುಂಡಗೋಡ ತಾಲೂಕಿನ ನಂದಿಪುರ ಕ್ರಾಸ್ ನಿಂದ ಮರಗಡಿ ಗೌಳಿದಡ್ಡಿ ತಾಲೂಕಾ ಗಡಿಯವರೆಗೆ 2.81 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕ್ಷೇತ್ರದ ಎಲ್ಲ ಗೌಳಿದಡ್ಡಿಗೂ ಸರಕಾರದ ವಿವಿಧ ಯೋಜನೆಗಳಲ್ಲಿ ಯಥೇಚ್ಛವಾಗಿ ಅನುದಾನ ಬಂದಿದೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ ಎಂಬುದು ನಮಗೆ ಸಂತೋಷ ತಂದಿದೆ ಸರಕಾರ ನಮ್ಮ ಕೇಳಿದ ಎಲ್ಲಾ ಕಾಮಗಾರಿಗಳಿಗೆ ಸ್ಪಂದಿಸಿದೆ ಎಂದರು
ತಾಲೂಕಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಧುರಿಣ ಕೃಷ್ಣ ಹಿರೇಹಳ್ಳಿ, ಎ.ಪಿ.ಎಂ.ಸಿ. ಉಪಾಧ್ಯಕ್ಷ ಬಾಬು ಕೋಣನಕೇರಿ ಮಾತನಾಡಿದರು.
ತಾ.ಪಂಚಾಯತ ಅಧ್ಯಕ್ಷೆ ದಾಕ್ಷಾಯಣ ಸುರಗೀಮಠ, ಜಿ.ಪಂ.ಸದಸ್ಯೆ ಜಯಮ್ಮ ಹಿರೇಹಳ್ಳಿ, ತಾ.ಪಂ. ಸದಸ್ಯೆ ಲಕ್ಷ್ಮಿ ಆರ್ ಜನಗೇರಿ, ಕಾತೂರ ವಲಯ ಅರಣ್ಯಾಧಿಕಾರಿ ಮಹೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.