ಮುಂಡಗೋಡ : ಪಕ್ಷದ ಕಾರ್ಯನಿಮಿತ್ತ ಆಗಮಿಸಿದ್ದ ಕಂದಾಯ ಸಚೀವ ಆರ್.ವಿ.ದೇಶಪಾಂಡೆ ಮಾರಿಕಾಂಬಾ ಜಾತ್ರಾಮಹೋತ್ಸವ ಗದ್ದುಗಿಗೆ (ಚೌತಮನೆಗೆ) ಭೇಟಿ ನೀಡಿ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು ದೇವಿಯ ಗದ್ದುಗೆ ಪವಿತ್ರ ಸ್ಥಳದಲ್ಲಿಯೇ ರಾಜ್ಯ ಪ್ರಶಸ್ತಿ ಪುರಸ್ಕøತ ಪತ್ರಕರ್ತ, ಭಗವಾನ್ ಬುದ್ದ ನ್ಯಾಶನಲ್ ಫೆಲೋಶಿಪ್ ಪ್ರಶಸ್ತಿ ಪಡೆದ, ಸಾಹಿತಿ ರಾಜಶೇಖರ ನಾಯ್ಕ ಅವರು ಬರೆದ ಮುಂಡಗೋಡದ ಗ್ರಾಮದೇವಿ (ಶ್ರೀಮಾರಿಕಾಂಬಾದೇವಿ)ಯ ಶ್ರೀದ್ಯಾಮವ್ವದೇವಿ ಅಷ್ಟೋತ್ತರ ಶತನಾಮಾವಳಿ ಪುಸ್ತಕವನ್ನು ಬಿಡುಗಡೆ ಮಾಡಿದರು.
ನಂತರ ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಮುಸ್ಲಿಂ ಧುರಿಣ ಬಿ.ಎಫ್ ಬೆಂಡಿಗೇರಿ ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಮನೆಗೆ ಹಾಗೂ ಇನ್ನೋರ್ವ ಧುರಿಣ ರಾಮಚಂದ್ರ ಪಾಲೇಕರ ಮನೆಗೆ ಭೇಟಿನೀಡಿ ಆರೋಗ್ಯ ವಿಚಾರಿಸಿದರು. ಪಕ್ಷದ ಕಾರ್ಯವನ್ನು ಮುಟುಕುಗೊಳಿಸಿ ವಿಶೇಷ ಕಾರ್ಯನಿಮಿತ್ತ ಹುಬ್ಬಳ್ಳಿಯಿಂದ ಬೆಂಗಳೂರಗೆ ತೆರಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬ್ಲಾಕ್ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ರವಿಗೌಡ ಪಾಟೀಲ, ಎಚ್.ಎಂ.ನಾಯ್ಕ, ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ,ಗುತ್ತಿಗೆದಾರರ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಜಿ.ಪಂ.ಸದಸ್ಯ ಎಲ್.ಟಿ.ಪಾಟೀಲ, ಪ.ಪಂ.ಮಜಿ ಅಧ್ಯಕ್ಷ ರಫೀಕ ಇನಾಂದಾರ, ಸಂಜು ಪೀಶೆ, ಸಿ.ಕೆ.ಅಶೋಕ, ರಾಮಕೃಷ್ಣ ಮೂಲಿಮನಿ ಶ್ರೀಮಾರಿಕಾಂಬಾದೇವಿ(ಶ್ರೀದ್ಯಾಮವ್ವದೇವಿ) ದೇವಸ್ಥಾನ ಟ್ರಸ್ಟ ಅಧ್ಯಕ್ಷರಾದ ರಮೇಶ ಕಾಮತ್, ಕಾರ್ಯಾಧ್ಯಕ್ಷರಾದ ಎಂ.ಬಿ.ಕುಟ್ರಿ, ಸಮಿತಿ ಸದಸ್ಯರು, ಮುಂತಾದವರಿದ್ದರು.