ಭಟ್ಕಳ: ಇಲ್ಲಿನ ಕೇಂದ್ರ ಮಿಲಾದ್ ಕಮಿಟಿ ವತಿಯಿಂದ ಮಂಗಳವಾರದಂದು ನಗರದ ವಿವಿದೆಡೆಯಿಂದ ಆಕರ್ಷಕ ಬೃಹತ್ ಮೀಲಾದ್ ಮೆರವಣೆಗೆಯನ್ನು ಆಯೋಜಿಸಲಾಗಿತ್ತು.
ಈದ್ಗಾ ಮೈದಾನದಿಂದ ಆರಂಭಗೊಂಡ ಮೆರವಣೆಗೆಯು ಶಮ್ಸುದ್ದೀನ್ ವೃತ್ತದ ಮೂಲಕ ಹಳೆ ಬಸ್ ನಿಲ್ದಾಣ, ಚೌಕ್ ಬಝಾರ್ ಮೂಲಕ ಸಾರ್ವಜನಿಕ ಗಣೇಶೋತ್ಸವ ಮೈದಾನದಲ್ಲಿ ಸಮಾಪ್ತಿಗೊಂಡಿತು.
ಮೆರವಣೆಗೆಯಲ್ಲಿ ಧಫ್ ನೃತ್ಯ ಮಾಡುವುದರ ಮೂಲಕ ಪ್ರವಾದಿ ಸ್ತುತಿಗೀತೆಯನ್ನು ಹಾಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಮೀಲಾದ್ ಕಮಿಟಿಯ ಮುಖಂಡರಾದ ಮೌಲಾನ ಫೈಝಾನ್ ಮೊಹತೆಶಮ್, ಮೌಲಾನ ರಯೀಸ್ ಅಕ್ರಮಿ, ಜಾವೀದ್ ಆಹ್ಮದ್ ಹಾಜಿಫಕ್ಕಿ, ಅಬು ಹುರೈರಾ ಅಕ್ರಮಿ, ಮೌಲಾನ ಅಶ್ರಫ್ ಸಿದ್ದೀಖಾ, ಇಸ್ಮಾಯಿಲ್ ಫಾರೂಖ್, ಖ್ವಾಜಾ ಸಾಹೇಬ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ನೂರಾರು ಮಂದಿ ಯುವಕರು ಪಾಲ್ಗೊಂಡಿದ್ದರು.