ಮನಮೋಹನ್ ಸಿಂಗ್ ಅವಧಿಯಲ್ಲಿ  ಭಾರತ ಪ್ರಗತಿಯ ಸ್ವರ್ಣಯುಗ-ವರದಿ

Source: sonews | By Staff Correspondent | Published on 18th August 2018, 5:42 PM | National News | Don't Miss |

ಹೊಸದಿಲ್ಲಿ: ಭಾರತದ ಆರ್ಥಿಕತೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅಂದರೆ 2006-07ರಲ್ಲಿ ಐತಿಹಾಸಿಕ ಗರಿಷ್ಠ ಪ್ರಮಾಣದ ಪ್ರಗತಿ ದಾಖಲಿಸಿದೆ ಎಂದು ಅಧಿಕೃತ ಅಂಕಿ ಅಂಶಗಳು ದೃಢಪಡಿಸಿವೆ. ಈ ಅವಧಿಯಲ್ಲಿ ಭಾರತ ಶೇಕಡ 10.08ರಷ್ಟು ಪ್ರಗತಿ ದಾಖಲಿಸಿದ್ದು, ಆರ್ಥಿಕ ಉದಾರೀಕರಣದ ಬಳಿಕ ಸಾಧಿಸಿದ ಗರಿಷ್ಠ ಪ್ರಗತಿ ಇದಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ.

ಸ್ವಾತಂತ್ರ್ಯದ ಬಳಿಕ ಗರಿಷ್ಠ ಆರ್ಥಿಕ ಪ್ರಗತಿ ದಾಖಲಾದದ್ದು ರಾಜೀವ್‍ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ. 1988-89ರಲ್ಲಿ ಭಾರತ ಶೇಕಡ 10.2ರಷ್ಟು ಪ್ರಗತಿ ದಾಖಲಿಸಿತ್ತು.

ಭಾರತದ ಜಿಡಿಪಿ ಬಗೆಗಿನ ಹಿಂದಿನ ಸರಣಿಯ ಅಂಕಿ ಅಂಶಗಳನ್ನು, ರಾಷ್ಟ್ರೀಯ ಅಂಕಿ ಅಂಶಗಳ ಆಯೋಗ ನೇಮಕ ಮಾಡಿದ ವಾಸ್ತವ ವಲಯ ಅಂಕಿ ಅಂಶಗಳ ಸಮಿತಿ ಸಿದ್ಧಪಡಿಸಿದೆ. ಈ ವರದಿಯನ್ನು ಅಂಕಿ ಸಂಖ್ಯೆಗಳ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಯ ತನ್ನ ವೆಬ್‍ಸೈಟ್‍ ನಲ್ಲಿ ಪ್ರಕಟಿಸಿದೆ.

ಈ ವರದಿಯು ಹಳೆಯ ಸರಣಿ (2004-05) ಮತ್ತು ಹೊಸ ಸರಣಿಯ ಪ್ರಗತಿ ದರವನ್ನು 2011-12ರ ಬೆಲೆಗಳ ಆಧಾರದಲ್ಲಿ ತುಲನೆ ಮಾಡುತ್ತದೆ. ಹಳೆ ಸರಣಿಯ ಅನ್ವಯ 2006-07ರಲ್ಲಿ ಅಂದರೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸ್ಥಿರ ಬೆಲೆ ಆಧಾರದಲ್ಲಿ ಜಿಡಿಪಿ ವಿಸ್ತರಣೆ ದರ 9.57 ಆಗಿತ್ತು. ಹೊಸ ಸರಣಿ (2011-12)ಯ ಅನ್ವಯ ಪ್ರಗತಿ ಸಂಖ್ಯೆ ಬದಲಾಗಿದ್ದು, ಇದನ್ನು 10.08 ಎಂದು ಪರಿಷ್ಕರಿಸಲಾಗಿದೆ.

"ಜಿಡಿಪಿ ಬ್ಯಾಕ್‍ ಸೀರಿಸ್ ಡಾಟಾ ಅಂತಿಮವಾಗಿ ಹೊರಬಿದ್ದಿದೆ. ಯುಪಿಎ ಅಧಿಕಾರಾವಧಿಯ 10 ವರ್ಷಗಳಲ್ಲಿ ಜಿಡಿಪಿ ಪ್ರಗತಿ ದರ ಶೇಕಡ 8.1 ಆಗಿದ್ದರೆ, ಮೋದಿ ಯುಗದಲ್ಲಿ ಇದು ಶೇಕಡ 7.3ರಷ್ಟಿದೆ" ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ. ಆಧುನಿಕ ಭಾರತದ ಇತಿಹಾಸದಲ್ಲಿ ಎರಡಂಕಿಯ ಪ್ರಗತಿಯನ್ನು ದಾಖಲಿಸಿದ ಏಕೈಕ ವರ್ಷ ಯುಪಿಎ ಆಡಳಿತದ ಅವಧಿಯಲ್ಲಿದೆ ಎಂದು ಪಕ್ಷ ಹೇಳಿದೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...