ಮಂಗಳೂರು: ದ.ಕ.ಜಿಲ್ಲೆಯ ಖ್ಯಾತ ಸಾಹಿತಿ ಬೋಳುವಾರು ಮುಹಮ್ಮದ್ ಕುಂಞಿ 2016ನೆ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ಮುಹಮ್ಮದ್ ಕುಂಞಿ ಯವರ “ಸ್ವಾತಂತ್ರ್ಯದ ಓಟ” ಕಾದಂಬರಿಗೆ ಈ ಪುರಸ್ಕಾರ ಲಭಿಸಿದೆ. ಪ್ರಶಸ್ತಿಯು ಒಂದು ಲಕ್ಷ ರೂ. ಮತ್ತು ಸ್ಮರಣಿಕೆಯನ್ನೊಳಗೊಂಡಿದ್ದು, 2017ರ ಫೆಬ್ರವರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ತಿಳಿದು ಬಂದಿದೆ.